ನಾನು ಈ ಟೀ ಅಂಗಡಿಯವರಿಗೆ ಮಾತು ಕೊಟ್ಟಿದ್ದೆ. ಚುನಾವಣೆ ಮುಗಿದ ಬಳಿಕ ಬರುವುದಾಗಿ ಹೇಳಿದ್ದೆ. ಅದರಂತೆ ನಾನು ಇಂದು ಇಲ್ಲಿಗೆ ಬಂದು ಟೀ ಕುಡಿದು ಹೋಗ್ತಿದ್ದೇನೆ. ಅದೇ ಸಮಯಕ್ಕೆ ಸರಿಯಾಗಿ ಯಾರೋ ಸೋಷಿಯಲ್ ಮೀಡಿಯಾದಲ್ಲಿ ನಾನು, ಅಮ್ಮ ಸಿಂಗಾಪುರಕ್ಕೆ ಹೋಗುವ ಸುಳ್ಳು ಸುದ್ದಿ ಹಬ್ಬಿಸಿದ್ರು. ಇವತ್ತು ನಾನು ನಿಮ್ಮ ಮುಂದೆ ಇದ್ದೇನೆ. ಯಾರು ಈ ಸುದ್ದಿ ಹಬ್ಬಿಸಿದ್ರೋ ಅವ್ರಿಗೆ ತಲುಪುತ್ತೆ ಬಿಡಿ ಎಂದರು.