ಪತ್ನಿ ಮುಖ ಸರಿಯಿಲ್ಲ ಎಂದು ಮೋದಿ ಹೆಂಡತಿ ಬಿಟ್ಟಿದ್ದಾರೆ: ಜಮೀರ್ ಅಹ್ಮದ್ ಖಾನ್

ಮಂಡ್ಯ ಲೋಕಸಭೆ ಚುನಾವಣೆ ಪ್ರಚಾರದ ವೇಳೆ ವಯಕ್ತಿಕ ನಿಂದನೆ ಮಿತಿ ಮೀರಿತ್ತು, ಈಗ ಹಾವೇರಿಯಲ್ಲಿ ಸಚಿವ ಜಮೀರ್ ಅಹ್ಮದ್ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ.
ಜಮೀರ್ ಅಹ್ಮದ್ ಖಾನ್
ಜಮೀರ್ ಅಹ್ಮದ್ ಖಾನ್
ಹಾವೇರಿ: ಮಂಡ್ಯ ಲೋಕಸಭೆ ಚುನಾವಣೆ  ಪ್ರಚಾರದ ವೇಳೆ  ವಯಕ್ತಿಕ ನಿಂದನೆ ಮಿತಿ ಮೀರಿತ್ತು, ಈಗ ಹಾವೇರಿಯಲ್ಲಿ  ಸಚಿವ ಜಮೀರ್ ಅಹ್ಮದ್ ತಮ್ಮ ನಾಲಗೆ ಹರಿಬಿಟ್ಟಿದ್ದಾರೆ.
ಹಾವೇರಿಯಲ್ಲಿ ಮೈತ್ರಿ ಅಭ್ಯರ್ಥಿ ಪರ ಪ್ರಚಾರ ಕೈಗೊಂಡಿದ್ದ ಸಚಿವ ಜಮೀರ್ ಅಹ್ಮದ್ ಮೋದಿ ವಿರುದ್ಧ ವಯಕ್ತಿಕವಾಗಿ ನಿಂದನೆಗಿಳಿದಿದ್ದಾರೆ. ಮುಖ ಸರಿಯಿಲ್ಲ ಎಂದು ಪ್ರಧಾನಿ ಮೋದಿ ಹೆಂಡತಿ ಬಿಟ್ಟಿದ್ದಾರೆ, ಇದ್ದಿದ್ದು ಒಬ್ಬ ಹೆಂಡತಿ, ಆ ಹೆಂಡತಿಯೇ ಅವರನ್ನು ಬಿಟ್ಟಿದ್ದಾರೆ, ಹೆಂಡತಿ ಬಿಟ್ಟವರ ಮುಖ ನೋಡಿ ದೇಶದ ಜನರು ವೋಟು ಹಾಕಬೇಕಾ ಎಂದು ಪ್ರಶ್ನಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುವ ಭರದಲ್ಲಿ ಜಮೀರ್ ಈ ಯಡವಟ್ಟು ಮಾಡಿಕೊಂಡಿದ್ದಾರೆ. ಹಾವೇರಿಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶಿವಕುಮಾರ್ ಉದಾಸಿ ಮೋದಿ ಮುಖ ನೋಡಿ ನನಗೆ ಮತ ಹಾಕಿ ಎಂದು ಹೇಳುತ್ತಿದ್ದಾರೆ, ಆದರೆ ಹೆಂಡತಿ ಬಿಟ್ಟವರ ಮುಖ ನೋಡಿ ಜನ ಮತ ಹಾಕಬೇಕಾ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com