ಸಂಜೆ ವೇಳೆಗೆ ಚಿಕ್ಕಮಗಳೂರು ,ಶಿವಮೊಗ್ಗ ,ಉತ್ತರ ಕನ್ನಡ ಜಿಲ್ಲೆಗಳ ಬಹುತೇಕ ಭಾಗದಲ್ಲಿ ಬಿರುಗಾಳಿ ಸಮೇತ ಆಲಿಕಲ್ಲು ಮಳೆ ಸುರಿದಿದೆ. ಹೀಗಾಗಿ ಬಿಸಿಲಿನ ತಾಪ ಕಡಿಮೆಯಾದ ಬಳಿಕ ಮತದಾನ ಮಾಡುವ ಉದ್ದೇಶ ಹೊಂದಿದವರಿಗೆ ಮಳೆ ತಣ್ಣೀರೆರಚಿದೆ. ಆಲಿಕಲ್ಲು ಮಳೆಯಿಂದ ಚಿಕ್ಕಮಗಳೂರು ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯ ಕೆಲ ವಿಧಾನ ಸಭಾ ಕ್ಷೇತ್ರಗಳಲ್ಲಿ ವಿದ್ಯುತ್ ಸಂಪರ್ಕ ಕಡಿದು ಹೋಗಿ ಮತದಾನಕ್ಕೆ ಅಡ್ಡಿಯುಂಟಾಗಿತ್ತು.