ಕಳೆದ 60 ವರ್ಷಗಳಲ್ಲಿ ನಮ್ಮ ಸಮಸ್ಯೆಗಳನ್ನು ಯಾವ ರಾಜಕೀಯ ನಾಯಕರು ಕೂಡ ಕೇಳಿ ಬಗೆಹರಿಸಿಲ್ಲ. ನಮ್ಮ ಮತ ಕೂಡ ಅವರಿಗೆ ಬೇಕಾದಂತಿಲ್ಲ ಎನ್ನುತ್ತಾರೆ ಗ್ರಾಮಸ್ಥರೊಬ್ಬರು. ಅವರ ಮಾತಿಗೆ ಗ್ರಾಮದ ಬೇರೆಯವರು ಕೂಡ ದನಿಗೂಡಿಸಿದರು. ಸರ್ಕಾರಕ್ಕೆ ಹಿಡಿಶಾಪ ಹಾಕಿದರು. ಬೆಳಗಾವಿಯ ಖಾನಾಪುರ ತಾಲ್ಲೂಕಿನ ಗವಳಿ, ಕೃಷ್ಣಾಪುರ, ಪಸ್ತೊಲಿ, ಕೊಂಗಲ, ತಲೆವಾಡಿ, ಜೊರ್ದನ್, ಸಯಚೆ ಮಾಲಾ, ಚಪೊಲಿ, ಕಪೊಲಿ, ಮುಡಗೈ, ಚಿರೆಖಾನಿ ಮತ್ತು ಆಮ್ಗೌನ್ ಗ್ರಾಮಸ್ಥರು ಮತದಾನ ಬಹಿಷ್ಕಾರ ಮಾಡಿದವರು.