ನಿರ್ವಹಣಾ ಸಮಿತಿ ಸಭೆ ಬಳಿಕ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಉಸ್ತುವಾರಿಗಳು, ಜಿಲ್ಲಾ ಪ್ರಮುಖರೊಂದಿಗೆ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹಾಗೂ ರಾಷ್ಟ್ರೀಯ ಸಂಘಟನಾ ಸಹ ಕಾರ್ಯದರ್ಶಿ ಬಿ.ಎಲ್.ಸಂತೋಷ್ ನೇತೃತ್ವದಲ್ಲಿ ಮತ್ತೊಂದು ಸಭೆ ನಡೆಸಲಾಯಿತು. ಸಭೆಯಲ್ಲಿ ಲೋಕಸಭಾ ಚುನಾವಣಾ ಮತದಾನ, ಬಿಜೆಪಿ ಗೆಲುವಿನ ಲೆಕ್ಕಚಾರ, ಸಾಧಕ ಬಾಧಕಗಳು, ಫಲಿತಾಂಶ ನಿರೀಕ್ಷೆ ಕುರಿತು ಮುಖಂಡರು ಸಂತೋಷ್ ಅವರಿಗೆ ವರದಿ ಸಲ್ಲಿಸಿದರು.