ಬುಧವಾರ ಕಲಬುರ್ಗಿಯ ಸೇಡಂ ನಲ್ಲಿ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದ ಖರ್ಗೆ ಅವಿಭಜಿತ ಕಲಬುರ್ಗಿ ಜಿಲ್ಲೆಯ ಗುರ್ಮಿಟ್ಕಲ್ ಲೋಕಸಭೆ ಕ್ಷೇತ್ರದ ಮತದಾರರು ನನ್ನನ್ನು 1972 ರಲ್ಲಿ ಮೊದಲ ಬಾರಿಗೆ 9,000 ಮತಗಳ ಅಂತರದಿಂದ ಆಯ್ಕೆ ಮಾಡಿ ದೆಹಲಿಗೆ ಕಳಿಸಿದ್ದರು.ಮತ್ತೆ ಎರಡನೆ, ಮೂರನೇ ನಾಲ್ಕನೇ ಲೋಕಸಭೆ ಚುನಾವಣೆಗಳಲ್ಲಿ ಈ ಗೆಲುವಿನ ಅಂತರ ಹೆಚ್ಚುತ್ತಾ ಹೋಗಿದೆ. ಈ ಹಿಂದಿನ ಲೋಕಸಭೆ ಚುನಾವಣೆಯಲ್ಲಿ ಕಲಬುರ್ಗಿ ಕ್ಷೇತ್ರದಿಂದ ನನ್ನ ಆಯ್ಕೆ ನಡೆದಿದ್ದು ಗೆಲುವಿನ ಅಂತರ 49,000 ಮತಗಳಾಗಿದ್ದವು.ಕಲಬುರ್ಗಿ ಜನತೆ ನನ್ನನ್ನು ಹನ್ನೊಂದು ಲೋಕಸಭೆ ಚುನಾವಣೆಗಳಲ್ಲಿ ಗೆಲ್ಲಿಸುತ್ತಾ ಬಂದಿದ್ದೀರಿ. ಈಗ ಇನ್ನೊಮ್ಮೆ ಕಟ್ಟ ಕಡೆಯ ಬಾರಿಗೆ ಗೆಲ್ಲಿಸಲಿದ್ದೀರಿ ಎನ್ನುವುದು ನನ್ನ ಆಶಯ. ಹನ್ನೊಂದು, ಇನ್ನೊಂದು, ಹನ್ನೆರಡಕ್ಕೆ ಮುಕ್ತಾಯ." ಖರ್ಗೆ ಹೇಳಿದ್ದಾರೆ.