ಈ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿದ ಅವರು , ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿಯವರ ಮಗನೇ ಕಣಕ್ಕಿಳಿದಿರುವುದರಿಂದ ಸರ್ಕಾರದ ಆಡಳಿತ ಯಂತ್ರದ ದುರುಪಯೋಗ ಮಾಡುತ್ತಿದ್ದಾರೆ. ನನ್ನ ಮನೆಯ ಮುಂದೆ ಕಳೆದ ಒಂದೂವರೆ-ಎರಡು ತಿಂಗಳಿನಿಂದ ಗೂಢಚಾರಿ ಪೊಲೀಸರನ್ನು ಬಿಟ್ಟಿದ್ದಾರೆ. ನಮ್ಮ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ. ನಮ್ಮ ಭದ್ರತೆ ಬಗ್ಗೆ ಆತಂಕವಿದೆ, ಮನೆಯ ಪಕ್ಕ ಗೂಢಚಾರಿ ಬಿಡುವ ಅಗತ್ಯವೇನಿದೆ? ನಾನೇನು ಕ್ರಿಮಿನಲಾ? ನಾನು ಕ್ರಿಮಿನಲ್ ಕೆಲಸವನ್ನು ಮಾಡಿದ್ದೇನೆಯೇ, ಆ ಅಧಿಕಾರ ಯಾರಿಗೂ ಇಲ್ಲ ಎಂದು ಸುಮಲತಾ ಆಕ್ರೋಶ ವ್ಯಕ್ತಪಡಿಸಿದರು.