ಆದರೆ ಇಲ್ಲಿಯವರೆಗೆ ಕೇವಲ 163 ನಾಗರಿಕರು ಮಾತ್ರ ಕರ್ನಾಟಕದಲ್ಲಿ ಇದರಡಿ ದಾಖಲು ಮಾಡಿಕೊಂಡಿದ್ದಾರೆ. ಲೋಕಸಭೆ ಚುನಾವಣೆಯ ಭಾಗವಾಗಿ ಇದನ್ನು ಆರಂಭಿಸಲಾಗಿತ್ತು. ಇದನ್ನು ನಾವು ಜನವರಿಯಲ್ಲಿಯೇ ಆರಂಭಿಸಿದ್ದರೂ ಕೂಡ ರಾಜ್ಯಾದ್ಯಂತ ಕೆಲವರು ಮಾತ್ರ ದಾಖಲಾತಿ ಮಾಡಿಕೊಂಡಿದ್ದಾರೆ. ಬಹುಶಃ ಬಹುತೇಕ ಮಂದಿಗೆ ಇದರ ಬಗ್ಗೆ ತಿಳಿದಿಲ್ಲ. ಅದರ ಬಗ್ಗೆ ನಾವು ಕೂಡ ಹೆಚ್ಚು ಪ್ರಚಾರ ಮಾಡಲಿಲ್ಲ ಎಂದು ಚುನಾವಣಾ ಆಯೋಗದ ಜಂಟಿ ಅಧಿಕಾರಿ ಸೂರ್ಯ ಸೇನ್ ಹೇಳಿದರು.