ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ಬೋವಿ ಗುರುಪೀಠದ ಸ್ವಾಮೀಜಿ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿ, ಚಿತ್ರದುರ್ಗದಲ್ಲಿ ಸುಮಾರು 2 ಲಕ್ಷ ಬೋವಿ ಜನಾಂಗದ ಮತದಾರರಿದ್ದರೂ ಕೂಡ ಈ ಸಮಾಜ ಹಲವು ವರ್ಷಗಳಿಂದ ತುಳಿತಕ್ಕೊಳಗಾಗಿದ್ದು ಸೌಲಭ್ಯವಂಚಿತವಾಗಿದೆ. ಚಿತ್ರದುರ್ಗ ಪರಿಶಿಷ್ಟ ಜಾತಿ ಕ್ಷೇತ್ರದಿಂದ ಬೋವಿ ಜನಾಂಗದ ಒಬ್ಬರಿಗೆ ಕೂಡ ಚುನಾವಣೆಯಲ್ಲಿ ನಿಲ್ಲುವ ಅವಕಾಶ ಸಿಕ್ಕಿಲ್ಲ. ಯಾವುದೇ ರಾಜಕೀಯ ಪಕ್ಷಗಳು ಈ ನಿಟ್ಟಿನಲ್ಲಿ ಗಮನ ಹರಿಸಿಲ್ಲ. ಹೀಗಾಗಿ ಚಿತ್ರದುರ್ಗ ಸೇರಿದಂತೆ ರಾಜ್ಯಾದ್ಯಂತ ಇರುವ ಬೋವಿ ಜನಾಂಗದವರಿಗೆ ಈ ಚುನಾವಣೆಯಲ್ಲಿ ಮತ ಚಲಾಯಿಸದಂತೆ ನಿರ್ದೇಶನ ನೀಡಲು ಮಠ ನಿರ್ಧರಿಸಿದೆ ಎಂದು ಹೇಳಿದರು.