ಪ್ರಜಾಕೀಯ ಜನಸಾಮಾನ್ಯರ ಪಕ್ಷವಾಗಿದ್ದು, ಸಭೆ, ಸಮಾರಂಭಗಳ ಅವಶ್ಯಕತೆ ಇಲ್ಲ, ಮಾಧ್ಯಮ, ಸಾಮಾಜಿಕ ಮಾಧ್ಯಮಗಳ ಮೂಲಕವೇ ಪ್ರಚಾರ ನಡೆಸಲಾಗುವುದು. ನಮ್ಮಗೆ ಕೆಲಸ ಕೊಡಿ ಕೆಲಸ ಮಾಡುತ್ತೇವೆ ಎನ್ನುವುದೇ ಪ್ರಚಾರ ತಂತ್ರವಾಗಿದೆ ಎಂದು ಹೇಳಿದರು
ದುಡ್ಡು ಮಾಡುವುದೇ ಸಮಾಜ ಸೇವೆ ಅಂತಾ ಕೆಲವರು ಅಂದುಕೊಂಡಿದ್ದಾರೆ. ಆದರೆ, ನಾವು ಕಾರ್ಮಿಕ ಅಂದುಕೊಂಡು ಪ್ರತಿಯೊಬ್ಬರು ಸಮಾಜ ಸೇವೆ ಮಾಡುತ್ತೇವೆ. ಚುನಾವಣೆ ಆದ ಮೇಲೆ ಬೇರೆ ಪಕ್ಷಾಂತರ ಗೊಂಡರೆ ಅವರ ಮನೆ ಮುಂದೆ ಧರಣಿ ಕುಳಿತುಕೊಳ್ಳುವುದಾಗಿ ಧರಣಿ ನಡೆಸುವುದಾಗಿ ಎಚ್ಚರಿಕೆ ನೀಡಿದರು.