ಕರ್ನಾಟಕದಲ್ಲಿ ಯಾರ ಪಾರುಪತ್ಯ: ಕಮಲ ಮತ್ತೆ ಅರಳಲಿದ್ಯಾ? ಎಕ್ಸಿಟ್ ಪೋಲ್ ವರದಿ ಹೇಳಿದ್ದೇನು?

ಮೇ 23ರಂದು ಪ್ರಕಟವಾಗಲಿರುವ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಭಾರೀ ನಿರಾಶೆ ಮೂಡಿಸಲಿದೆ ಎಂದು ಎಕ್ಸಿಟ್ ...
ಸಾಂದರ್ಬಿಕ ಚಿತ್ರ
ಸಾಂದರ್ಬಿಕ ಚಿತ್ರ
ಬೆಂಗಳೂರು: ಮೇ 23ರಂದು ಪ್ರಕಟವಾಗಲಿರುವ ಲೋಕಸಭೆ ಚುನಾವಣೆ ಫಲಿತಾಂಶದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳಿಗೆ ಭಾರೀ ನಿರಾಶೆ ಮೂಡಿಸಲಿದೆ ಎಂದು ಎಕ್ಸಿಟ್ ಪೋಲ್ ವರದಿ ತಿಳಿಸಿದೆ. ಮೈತ್ರಿ ಪಕ್ಷಗಳು ಕೇವಲ 7-9 ಸೀಟು ಗೆಲ್ಲಲಿದೆ ಎಂದು ಅಂದಾಜಿಸಲಾಗಿದೆ. 
ವಿರೋಧ ಪಕ್ಷ ಬಿಜೆಪಿ ರಾಜ್ಯದಲ್ಲಿ ಮತ್ತೆ ತನ್ನ ಹಿಡಿತ ಸಾಧಿಸಲಿದೆ, ಬಿಜೆಪಿ 20 ಕ್ಕೂ ಹೆಚ್ಚು ಸ್ಥಾನ ಗೆಲ್ಲಲಿದೆ ಎಂಬು ಸಮೀಕ್ಷೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ. ಚುನಾವಣೆ ಸಮಯದಲ್ಲಿ ಎರಡು ಪುಕ್ಷಗಳು ಹೆಚ್ಚಿನ ಸೀಟು ಪಡೆಯುವುದಾಗಿ ಹೇಳಿದ್ದರು. 
ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಪಕ್ಷಗಳು 20 ಸೀಟು ಗೆಲ್ಲುವುದಾಗಿ ಕೈ ಮುಖಂಡರು ಹೇಳಿದ್ದರು. ಬಿಜೆಪಿ ನಿರ್ಧಿಷ್ಟವಾಗಿ 22 ಸೀಟು ಗೆಲ್ಲುವ ವಿಶ್ವಾಸ ವ್ಯಕ್ತ ಪಡಿಸಿತ್ತು,ಏಪ್ರಿಲ್ 18 ಮತ್ತು 23 ರಂದು ರಾಜ್ಯದಲ್ಲಿ ಎರಡು ಹಂತದಲ್ಲಿ ಲೋಕಸಭೆ ಚುನಾವಣೆಗೆ ಮತದಾನ ನಡೆದಿತ್ತು.
ರಾಜ್ಯದಲ್ಲಿ ಬಿಜೆಪಿ ಸುಮಾರು 18 ಸೀಟು ಗೆಲ್ಲಲಿದೆ ಎಂದು ಎನ್ ಡಿಟಿವಿ ಸಮೀಕ್ಷೆ ತಿಳಿಸಿದೆ, 9 ಕಾಂಗ್ರೆಸ್-ಜೆಡಿಎಸ್ ಮತ್ತು ಇತರರ ಪಾಲಾಗಲಿದೆ ಎಂದು ತಿಳಿಸಿದೆ.
ಐಎನ್ ಎನ್ ಎಸ್-ಸಿ ವೋಟರ್ ಸಮೀಕ್ಷೆ ಪ್ರಕಾರ ರಾಜ್ಯದ 28 ಕ್ಷೇತ್ರಗಳಲ್ಲಿ ಬಿಜೆಪಿ 17 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎನ್ನಲಾಗುತ್ತಿದೆ. 2014ರ ಚುನಾವಣಾ ಫಲಿತಾಂಶವೆ ಮರಕಳಿಸಲಿದ್ದು, ಕಾಂಗ್ರೆಸ್ ಮತ್ತು ಜೆಡಿಎಸ್  ಪಕ್ಷಗಳ ಸಾಮರ್ಥ್ಯದಲ್ಲಿ ಯಾವುದೇ ಬದಲಾವಣೆ  ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.
ಆಡಳಿತಾರೂಢ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಈ ಚುನಾವಣಾ ಸಮೀಕ್ಷೆಯಿಂದ ಹಿನ್ನಡೆಯಾಗಿದ್ದು ರಾಜ್ಯ ರಾಜಕೀಯದಲ್ಲಿ ಹಲವು ಬದಲಾವಣೆಗಳಾಗುವ ಸಾಧ್ಯತೆಯಿದೆ. ಸದ್ಯ ನಡೆಯುತ್ತಿರುವ ಸಮೀಕ್ಷೆಗಳು ತುಂಬಾ ಸತ್ಯವಾಗಿರುತ್ತವೆ ಎಂದು ಬಿಜೆಪಿ ಹೇಳಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com