ದೇಶದ ಮಹಾಜನತೆ ಎಕ್ಸಿಟ್ ಪೋಲ್ ಗಳನ್ನು ಸುಳ್ಳು ಮಾಡಲಿದೆ: ಪ್ರಕಾಶ್ ರೈ

ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಕೇವಲ ಸುಳ್ಳಿನ ಕಂತೆ, ಕೆಲವು ದಿನಗಳವರೆಗೆ ಅವರು ಕನಸು ಕಾಣಲಿ, ನಾಗರಿಕರು ಈ ಎಕ್ಸಿಟ್ ಪೋಲ್ ಗಳನ್ನು ಸುಳ್ಲಾಗಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಖ್ಯಾತ ನಟ....
ಪ್ರಕಾಶ್ ರೈ
ಪ್ರಕಾಶ್ ರೈ
ಬೆಂಗಳೂರು: ಚುನಾವಣೋತ್ತರ ಮತಗಟ್ಟೆ ಸಮೀಕ್ಷೆಗಳು ಕೇವಲ ಸುಳ್ಳಿನ ಕಂತೆ, ಕೆಲವು ದಿನಗಳವರೆಗೆ ಅವರು ಕನಸು ಕಾಣಲಿ, ನಾಗರಿಕರು ಈ ಎಕ್ಸಿಟ್ ಪೋಲ್ ಗಳನ್ನು ಸುಳ್ಳಾಗಿಸಲಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಖ್ಯಾತ ನಟ ಹಾಗೂ ಬೆಂಗಳೂರು ಕೇಂದ್ರ ಕ್ಶೇತ್ರದ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಹೇಳಿದ್ದಾರೆ. 
ಭಾನುವಾರ ಹೊರಬಿದ್ದ ಚುನಾವಣೋತ್ತರ ಸಮೀಕ್ಷೆ (ಎಕ್ಸಿಟ್ ಪೋಲ್) ಗಳ ಪೈಕಿ ಬಹುತೇಕ ಎಲ್ಲಾ ಸಮೀಕ್ಷೆಗಳೂ ದೇಶದಲ್ಲಿ ಇನ್ನೊಮ್ಮೆ ಎನ್ಡಿಎ ಸರ್ಕಾರ ಅಧಿಕಾರಕ್ಕೆ ಮರಳಲಿದೆ ಎಂದು ಹೇಳಿತ್ತು.
ಈ ಕುರಿತಂತೆ ಟ್ವೀಟ್ ಮಾಡಿರುವ ಪರ್ಕಾಶ್ ರೈ "ಎಕ್ಸಿಟ್ ಪೋಲ್ ಗಳು ಸುಳ್ಲಾಗಲಿದೆ" ಎಂದಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com