ಸಾಮಾನ್ಯ ಗ್ರಹಿಕೆಯಂತೆ ಹೇಳಿದರೆ ಕಾಂಗ್ರೆಸ್ ನೊಂದಿಗಿನ ಮೈತ್ರಿ ಜೆಡಿಎಸ್ ಗೆ ಏನೇನೂ ಲಾಭದಾಯಕವಾಗಿ ಪರಿಣಮಿಸಿಲ್ಲ. ಮಂಡ್ಯ, ಹಾಸನಗಳಲ್ಲಿ ಹೊರತು ಬೇರೆಡೆಗಳಲ್ಲಿ ಪಕ್ಷದ ವರ್ಚಸ್ಸು ಹೆಚ್ಚಿಸಿಕೊಳ್ಲುವುದಕ್ಕೆ ಇದು ಸಹಕಾರಿಯಾಗಿಲ್ಲ. ತುಮಕೂರಿನಲ್ಲಿ ಜೆಡಿಎಸ್ ಗೆ ಕಾಂಗ್ರೆಸ್ ಪ್ರಾರಂಭದಲ್ಲಿ ನೇರವಾಗಿಯೇ ಟಕ್ಕರ್ ನೀಡಿತ್ತು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಹ ಮೈತ್ರಿ ಎಲ್ಲಾ ಕ್ಷೇತ್ರಗಳಲ್ಲಿಯೂ ಕೆಲಸ ಮಾಡಲಿಲ್ಲ ಎಂದು ಒಪ್ಪಿಕೊಂಡರು.ಮಂಡ್ಯದಲ್ಲಿ, ಸ್ಥಳೀಯ ಕಾಂಗ್ರೆಸ್ ನಾಯಕರು ನಟಿ ಸುಮಲತಾ ಅಂಬರೀಶ್ ಪರವಾಗಿದ್ದರು ಎಂಬ ಆರೋಪಗಳು ಕೇಳಿಬಂದಿದ್ದರಿಂದ ಮುಖ್ಯಮಂತ್ರಿಗಳು ತಾವು ಕಡೆಯ ನಾಲ್ಕು ದಿನಗಳ ಪ್ರಚಾರ ಕಾರ್ಯದ ವೇಳೆ ಕೇವಲ ಮಂಡ್ಯ ಜಿಲ್ಲೆಯಲ್ಲಿ ಮಾತ್ರ ಪ್ರಚಾರಕ್ಕಿಳಿಯಬೇಕಾಗಿ ಬಂದಿತ್ತು. ಎಂದರೆ ಸಿಎಂ ಕೇವಲ ಒಂದು ಕ್ಷೇತ್ರದ ಪ್ರಚಾರದಲ್ಲೇ ಹೆಚು ಸಮಯ ತೆಗೆದುಕೊಂಡರು. ಅದಕ್ಕಷ್ಟೇ ಸೀಮಿತ ಹೊಂದಿದ್ದರು.ಈ ಮಹಾಮೈತ್ರಿಯಿಂದಾಗಿ ಜೆಡಿಎಸ್ ಹೆಚ್ಚೆಂದರೆ ಮೂರು ಸ್ಥಾನ ಗೆಲ್ಲಬಹುದು. ಅದಾಗ್ಯೂ ಆ ಸಂಖ್ಯೆ ಇನ್ನಷ್ಟು ತಗ್ಗುವ ಸಾಧ್ಯತೆಯನ್ನೂ ಅಲ್ಲಗೆಳೆಯಲಾಗದೆ, ಜನರ ಅಂತಿಮ ತೀರ್ಪು ಇದನ್ನು ನಿರ್ಧರಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.