ಎಲ್ಲೆಲ್ಲೂ ಕೇಸರಿ ಗರ್ಜನೆ, ಸ್ವಾಭಿಮಾನಿ ಭಾರತೀಯರ ಹೆಮ್ಮೆಯ ದಿನ- ನವರಸ ನಾಯಕ ಜಗ್ಗೇಶ್ ಟ್ವೀಟ್

ಬಿಜೆಪಿ ಪಕ್ಷದ ಈ ಅಭೂತಪೂರ್ವ ಸಾಧನೆಯನ್ನು ಸ್ವಾಗತಿಸಿ ಚಲನಚಿತ್ರ ನಟ ಹಾಗೂ ಪಕ್ಷದ ಕಾರ್ಯಕರ್ತರು ಆಗಿರುವ ನವರಸ ನಾಯಕ ಜಗ್ಗೇಶ್ ಟ್ವೀಟ್ ಮಾಡಿದ್ದಾರೆ.
ಜಗ್ಗೇಶ್, ಬಿ.ಎಸ್. ಯಡಿಯೂರಪ್ಪ
ಜಗ್ಗೇಶ್, ಬಿ.ಎಸ್. ಯಡಿಯೂರಪ್ಪ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟ ಮ್ಯಾಜಿಕ್ ನಂಬರ್ 272ನ್ನು ಮೀರಿ 350ರ ಗಡಿ ಸಮೀಪಿಸುತ್ತಿದ್ದು, ಜಯದ ನಾಗಲೋಟದತ್ತ ದಾಪುಗಾಲು ಹಾಕಿದೆ.  ಕೇಂದ್ರದಲ್ಲಿ ಈ ಬಾರಿಯೂ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗುವ ಸ್ಪಷ್ಟ ಸೂಚನೆ ಸಿಕ್ಕಿದೆ.

ದಕ್ಷಿಣ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಬಿಜೆಪಿ 24 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಈ ಬಾರಿ ಉತ್ತಮ ಸಾಧನೆಯತ್ತ ಹೆಜ್ಜೆ ಹಾಕಿದ್ದಾರೆ. ಬಿಜೆಪಿ ಪಕ್ಷದ ಈ ಅಭೂತಪೂರ್ವ ಸಾಧನೆಯನ್ನು ಸ್ವಾಗತಿಸಿ  ಚಲನಚಿತ್ರ ನಟ ಹಾಗೂ ಪಕ್ಷದ ಕಾರ್ಯಕರ್ತರು ಆಗಿರುವ ನವರಸ ನಾಯಕ ಜಗ್ಗೇಶ್  ಟ್ವೀಟ್ ಮಾಡಿದ್ದಾರೆ.

ಅದ್ಭುತ, ಅತ್ಯಧ್ಬುತ... ಸ್ವಾಭಿಮಾನಿ ಭಾರತೀಯರ ಹೆಮ್ಮೆಯ ದಿನ....ಸಂಭವಾಮಿ ಯುಗೇ ಯುಗೆ ಎಂದು ಟ್ವೀಟ್ ಮಾಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com