ಮನಮೋಹನ್ ಸಿಂಗ್ ಭಾರತದ ಮುಂದಿನ ಪ್ರಧಾನಿ: ಜಿ.ಎಸ್.ಬಸವರಾಜು ಎಡವಟ್ಟು
ಮನಮೋಹನ್ ಸಿಂಗ್ ಭಾರತದ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕ, ತುಮಕೂರು ಕ್ಷೇತ್ರದ ಅಭ್ಯರ್ಥಿ ಜಿ.ಎಸ್.ಬಸವರಾಜು ಹೇಳಿದ್ದು ಕೇಸರಿ ಪಕ್ಷವನ್ನು ಮುಜುಗರಕ್ಕೀಡುಮಾಡಿದ್ದಾರೆ.
ತುಮಕೂರು: ಮನಮೋಹನ್ ಸಿಂಗ್ ಭಾರತದ ಮುಂದಿನ ಪ್ರಧಾನಿಯಾಗಲಿದ್ದಾರೆ ಎಂದು ಬಿಜೆಪಿ ನಾಯಕ, ತುಮಕೂರು ಕ್ಷೇತ್ರದ ಅಭ್ಯರ್ಥಿ ಜಿ.ಎಸ್.ಬಸವರಾಜು ಹೇಳಿದ್ದು ಕೇಸರಿ ಪಕ್ಷವನ್ನು ಮುಜುಗರಕ್ಕೀಡುಮಾಡಿದ್ದಾರೆ.
ತುಮಕೂರು ಕ್ಷೇತ್ರದ ಮತ ಎಣಿಕೆ ಕೇಂದ್ರಕ್ಕೆ ಆಗಮಿಸಿದ ಬಸವರಾಜು ಅಲ್ಲಿನ ವಿಶ್ರಾಂತಿ ಕೊಠಡಿಯಲ್ಲಿ ಸುದ್ದಿಗಾರರೊಡನೆ ಮಾತನಾಡುತ್ತಾ "ಮನಮೋಹನ್ ಸಿಂಗ್ ಭಾರತದ ಮುಂದಿನ ಪ್ರಧಾನಿಯಾಗಲಿದ್ದಾರೆ" ಎಂದು ಎಡವಟ್ಟು ಹೇಳಿಕೆ ನಿಡಿದ್ದಾರೆ.