ಸುಮಲತಾ ಅಂಬರೀಷ್ ನಾಮಪತ್ರ ಸಲ್ಲಿಕೆ ಮಾಡಿದ ಬೆನ್ನಲ್ಲೇ ಅವರ ವಿರುದ್ಧ ವಾಗ್ದಾಳಿ ನಡೆಸಿದ್ದ ಜೆಡಿಎಸ್ ನಾಯಕರು, ಪರೋಕ್ಷವಾಗಿ ಮತದಾರರ ಆಕ್ರೋಶಕ್ಕೆ ಕಾರಣರಾಗಿದ್ದರು. ಚುನಾವಣೆ ಆರಂಭದಲ್ಲೇ ಸಚಿವ ಎಚ್ ರೇವಣ್ಣ ನೀಡಿದ್ದ ಹೇಳಿಕೆ ಭಾರಿ ವಿವಾದ ಸೃಷ್ಟಿಸಿತ್ತು, ಗಂಡ ಸತ್ತ ಬಳಿಕ ಚುನಾವಣೆಗೆ ಹೆಣ್ಣು ನಿಲ್ಲಬಾರದಾ ಎಂಬ ಬೆಂಬಲ ಸುಮಲತಾ ಅವರಿಗೆ ವ್ಯಕ್ತವಾಗಿತ್ತು. ರೇವಣ್ಣ ಅವರ ಹೇಳಿಕೆಗೆ ಅವರದೇ ಪಕ್ಷದ ನಾಯಕರಿಂದಲೇ ವಿರೋಧ ವ್ಯಕ್ತವಾಗಿತ್ತು. ಆ ಬಳಿಕ ಶಿವರಾಮೇಗೌಡ ಅವರು ನೀಡಿದ್ದ ಮಾಯಾಂಗನೆ, ಐಟಿ ದಾಳಿ ಬೆದರಿಕೆ, ಸಿನಿಮಾ ನಟರು, ವಿದೇಶಿ ಪ್ರವಾಸಿಗರು. ಸಿಂಗಾಪುರಕ್ಕೆ ಹೋಗ್ತಾರೆ, ಕೆಲಸ ಮಾಡಲ್ಲ ಎಂಬ ಹೇಳಿಕೆಗಳೂ ಕೂಡ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗಿತ್ತು. ಇದು ಸುಮಲತಾ ಪರ ಜಿಲ್ಲೆಯಲ್ಲಿ ಅನುಕಂಪದ ಅಲೆ ಸೃಷ್ಟಿಯಾಗಲು ಕಾರಣವಾಗಿತ್ತು.