ಮೊದಲಿಗೆ ಕುಕ್ಕರ್'ಗೆ ಚೆನ್ನಾಗಿ ತೊಳೆದ ತೊಗರಿಬೇಳೆ, ಅರಿಶಿಣದ ಪುಡಿ ಹಾಗೂ 1 ಚಮಚ ಎಣ್ಣೆ ಹಾಗೂ ನೀರು ಹಾಕಿ ಮುಚ್ಚಳ ಮುಚ್ಚಿ 3-4 ಕೂಗು ಕೂಗಿಸಿಕೊಳ್ಳಿ.
ನಂತರ ಬೆಂದ ಬೇಳೆಯಿಂದ ನೀರು ಬಸಿದು ಬೇಳೆಯನ್ನು ನುಣ್ಣಗೆ ಮಾಡಿಕೊಳ್ಳಿ. ನಂತರ ಬಸಿದ ನೀರನ್ನು ಇದಕ್ಕೆ ಹಾಕಿಟ್ಟುಕೊಳ್ಳಿ.
ಮತ್ತೊಂದೆಡೆ ಒಲೆಯ ಮೇಲೆ ಬಾಣಲೆ ಇಟ್ಟು ಅದಕ್ಕೆ ಎಣ್ಣೆ ಹಾಕಿ. ಕಾದ ನಂತರ ಸಾಸಿವೆ, ಇಂಗು, ಜಜ್ಜಿಗೊಂಡ ಬೆಳ್ಳುಳ್ಳು, ಸ್ವಲ್ಪ ಈರುಳ್ಳಿ, ಕರಿಬೇವು ಹಾಕಿ ಕೆಂಪಗೆ ಹುರಿದುಕೊಳ್ಳಿ.
ನಂತರ ಹಸಿ ಮೆಣಸಿನ ಕಾಯಿ, ಟೊಮೆಟೋ, ಉಪ್ಪು ಹಾಕಿ ಚೆನ್ನಾಗಿ ಬೇಸಿಯಿಕೊಳ್ಳಿ. ಬಳಿಕ ಹುಣಸೆ ರಸ, ಜೀರಿಗೆ ಪುಡಿ ಹಾಕಿ 2 ನಿಮಿಷ ಬಿಡಿ, ಈಗಾಗಲೇ ಸ್ಮ್ಯಾಷ್ ಮಾಡಿಟ್ಟುಕೊಂಡ ಬೇಳೆ ಹಾಗೂ ರಸವನ್ನು ಇದಕ್ಕೆ ಹಾಕಿ ಮಿಶ್ರಣ ಮಾಡಿ, ಅಗತ್ಯವಿದ್ದಷ್ಟು ನೀರು ಹಾಕಿ 8-10 ನಿಮಿಷ ಕುದಿಯಲು ಬಿಡಿ. ಇದೀಗ ಕೊತ್ತಂಬರಿ ಸೊಪ್ಪಿನೊಂದಿಗೆ ಅಲಂಕರಿಸಿದರೆ ರುಚಿಕರವಾದ ತಿಳಿಸಾರು ಸವಿಯಲು ಸಿದ್ಧ.