ಬೆಂಗಳೂರು: ಬಿರು ಬೇಸಿಗೆ ನಂತರ ಆರಂಭವಾಗುವ ಮಳೆಗಾಲದಲ್ಲಿ ಸರಿಯಾಗಿ ಜೀವನ ನಿರ್ವಹಣೆ ಮಾಡದಿದ್ದರೆ ಅನೇಕ ಅಪಾಯಗಳನ್ನು ತಂದುಕೊಳ್ಳುವ ಸಾಧ್ಯತೆ ಹೆಚ್ಚಾಗಿರುತ್ತದೆ. ಪ್ರತಿ ಋತುಮಾನ ಬದಲಾದಂತೆ ನಮ್ಮ ದೇಹವು ಕೂಡಾ ಹೊಸ ತಾಪಮಾನಕ್ಕೆ ತಕ್ಕಂತೆ ಹೊಂದಿಕೊಳ್ಳುವುದು ಅವಶ್ಯಕವಾಗುತ್ತದೆ.
ಮಳೆಗಾಲದಲ್ಲಿ ದೇಶದ ಹಲವೆಡೆ ಭಾರೀ ಮಳೆಯಾಗುತ್ತಿರುವಂತೆಯೇ, ಬೇಸಿಗೆಯಿಂದ ಮಳೆಗಾಲಕ್ಕೆ ತಿರುಗುತ್ತಿದ್ದಂತೆ
ರೋಗ ರೋಗ ನಿರೋಧಕ ಶಕ್ತಿ ಕಡೆಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ.
ಈ ಕಾಲದಲ್ಲಿ ಟೈಪಾಯಿಡ್, ಅತಿಸಾರ ಭೇದಿ, ಹೆಪಾಟಿಟಿಸ್ ಎ ಮತ್ತು ಇ, ಜಾಂಡೀಸ್, ಪುಡ್ ಪಾಯಿಸನ್, ಮಲೇರಿಯಾ, ಡೆಂಘೀಯಂತಹ ನೀರಿನಿಂದ ಹರಡಬಲ್ಲ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆ ಇದೆ.
ಎಲ್ಲಾ ಸಂದರ್ಭದಲ್ಲಿ ರೋಗ ನಿರೋಧಕ ಶಕ್ತಿ ಕುಂದದಂತೆ ನೋಡಿಕೊಳ್ಳಬೇಕಾಗುತ್ತದೆ. ಶೇ. 80 ರಷ್ಟು ರೋಗ ನಿರೋಧಕ ಶಕ್ತಿ ನಿಮ್ಮ ಕರುಳಿನ ಆರೋಗ್ಯವನ್ನು ಅವಲಂಬಿಸಿರುತ್ತದೆ.ಇದೆಲ್ಲವೂ ಬರೀ ಆಹಾರ ಪದಾರ್ಥ ಮಾತ್ರವಲ್ಲದೇ, ಒಟ್ಟಾರೇ, ಜೀವನ ಶೈಲಿ ಮೇಲೆ ಅವಲಂಬಿತವಾಗಿರುತ್ತದೆ.
ಸದೃಢ ಆರೋಗ್ಯ ಮತ್ತು ರೋಗ ನಿರೋಧಕ ಶಕ್ತಿ ವೃದ್ಧಿಗಾಗಿ ಈ ಕೆಳಗೆ ನೀಡಿರುವಂತೆ ಕೆಲವೊಂದು ಮುಂಜಾಗ್ರತೆ ವಹಿಸಬೇಕಾಗುತ್ತದೆ.
Advertisement