social_icon

ಕ್ಯಾನ್ಸರ್‌‌ನಿಂದ ಗುಣಮುಖರಾದವರಿಗೆ ಉಂಟಾಗುವ ಪರಿಣಾಮಗಳನ್ನು ನಿಭಾಯಿಸುವುದು ಹೇಗೆ?

ಅಂತರರಾಷ್ಟ್ರೀಯ ಅಂಕಿಅಂಶಗಳ ಪ್ರಕಾರ, ಸದ್ಯ ಲಭ್ಯವಿರುವ ಚಿಕಿತ್ಸಾ ತಂತ್ರಗಳೊಂದಿಗೆ ಸುಮಾರು ಮೂರು ವಿಧದ ಕ್ಯಾನ್ಸರ್‌ಗಳಲ್ಲಿ ಎರಡನ್ನು ಗುಣಪಡಿಸಬಹುದಾಗಿದೆ. ಆದಾಗ್ಯೂ, ಹೆಚ್ಚಿನ ಕ್ಯಾನ್ಸರ್ ಪೀಡಿತರಿಗೆ ಗುಣವಾಗುವುದು ಎಂದರೆ ಅಂತ್ಯವಾದಂತಲ್ಲ. ಗುಣಮುಖವಾದ ಬಳಿಕವೂ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.

Published: 07th February 2023 04:10 PM  |   Last Updated: 07th February 2023 04:10 PM   |  A+A-


Representative Image

ಪ್ರಾತಿನಿಧಿಕ ಚಿತ್ರ

Posted By : Ramyashree GN
Source : Express News Service

ಬೆಂಗಳೂರು: ಅಂತರರಾಷ್ಟ್ರೀಯ ಅಂಕಿಅಂಶಗಳ ಪ್ರಕಾರ, ಸದ್ಯ ಲಭ್ಯವಿರುವ ಚಿಕಿತ್ಸಾ ತಂತ್ರಗಳೊಂದಿಗೆ ಸುಮಾರು ಮೂರು ವಿಧದ ಕ್ಯಾನ್ಸರ್‌ಗಳಲ್ಲಿ ಎರಡನ್ನು ಗುಣಪಡಿಸಬಹುದಾಗಿದೆ. ಆದಾಗ್ಯೂ, ಹೆಚ್ಚಿನ ಕ್ಯಾನ್ಸರ್ ಪೀಡಿತರಿಗೆ ಗುಣವಾಗುವುದು ಎಂದರೆ ರೋಗ ಅಂತ್ಯವಾದಂತಲ್ಲ. ಗುಣಮುಖವಾದ ಬಳಿಕವೂ ಸಾಕಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.

ಕ್ಯಾನ್ಸರ್ ಬದುಕುಳಿಯುವಿಕೆಯು ಕ್ಯಾನ್ಸರ್ ರೋಗನಿರ್ಣಯ ಮತ್ತು ಚಿಕಿತ್ಸೆ ಪಡೆದ ವ್ಯಕ್ತಿಗಳಿಗೆ ಜೀವನದ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಆರ್ಥಿಕ ಅಂಶಗಳನ್ನು ಸೂಚಿಸುತ್ತದೆ. ಇದು ರೋಗನಿರ್ಣಯದಿಂದ ಹಿಡಿದು ಜೀವನದ ಅಂತ್ಯದವರೆಗಿನ ಅವಧಿಯನ್ನು ಒಳಗೊಳ್ಳುತ್ತದೆ. ಅಲ್ಲದೆ, ದೀರ್ಘಕಾಲದ ಆರೋಗ್ಯ ಪರಿಸ್ಥಿತಿಗಳು ಮತ್ತು ಚಿಕಿತ್ಸೆಯ ಅಡ್ಡ ಪರಿಣಾಮಗಳು, ಕ್ಯಾನ್ಸರ್ ಮರುಕಳಿಸುವಿಕೆ, ಎರಡನೇ ಕ್ಯಾನ್ಸರ್‌ಗಳು, ಆರ್ಥಿಕ ಮತ್ತು ಉದ್ಯೋಗ ತೊಂದರೆಗಳು, ಸಂಬಂಧಗಳಲ್ಲಿ ತೊಂದರೆ ಮತ್ತು ವೈಯಕ್ತಿಕ ಗುರುತಿನಲ್ಲಿ ಬದಲಾವಣೆಗಳು ಸೇರಿದಂತೆ ಉದ್ಭವಿಸಬಹುದಾದ ಸಮಸ್ಯೆಗಳು ಮತ್ತು ಸವಾಲುಗಳನ್ನು ಒಳಗೊಳ್ಳುತ್ತದೆ.

ಕಳೆದ ಮೂರು ದಶಕಗಳಲ್ಲಿ ಕ್ಯಾನ್ಸರ್‌ನಿಂದ ಬದುಕುಳಿದವರ ಸಂಖ್ಯೆಯು ಮಹತ್ತರವಾಗಿ ಹೆಚ್ಚಿದೆ ಮತ್ತು ಚಿಕಿತ್ಸೆಯನ್ನು ಪತ್ತೆಹಚ್ಚಲು ಮತ್ತು ಒದಗಿಸಲು ಆರೋಗ್ಯ ರಕ್ಷಣೆಯಲ್ಲಿ ಸುಧಾರಣೆಯಾಗಿದೆ. ಇತ್ತೀಚಿನ ಅಧ್ಯಯನಗಳು 5 ವರ್ಷಗಳ ಸಾಪೇಕ್ಷ ಬದುಕುಳಿಯುವಿಕೆಯ ಪ್ರಮಾಣದಲ್ಲಿ ಸ್ಥಿರವಾದ ಹೆಚ್ಚಳವಾಗಿರುವುದನ್ನು ಸೂಚಿಸುತ್ತವೆ. ಇದು ಸದ್ಯ ವಯಸ್ಕರಿಗೆ ಶೇ 66ರಷ್ಟು ಮತ್ತು ಮಕ್ಕಳಿಗೆ ಶೇ 80ರಷ್ಟಿದೆ.

ಈ ಪೈಕಿ ಪುರುಷರಲ್ಲಿ ಪ್ರಾಸ್ಟೇಟ್ ಕ್ಯಾನ್ಸರ್ (ಶೇ 44), ನಂತರ ಜೆನಿಟೂರ್ನರಿ ಕ್ಯಾನ್ಸರ್ (ಶೇ 12) ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ (ಶೇ 11) ಕಂಡುಬರುತ್ತದೆ. ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ (ಸೇ 43), ಸ್ತ್ರೀರೋಗ ಕ್ಯಾನ್ಸರ್ (17%) ಮತ್ತು ಕೊಲೊರೆಕ್ಟಲ್ ಕ್ಯಾನ್ಸರ್ (10%) ಹೆಚ್ಚಾಗಿ ಕಂಡುಬರುತ್ತದೆ.

ಪರಿಣಾಮಗಳು

ಕ್ಯಾನ್ಸರ್‌ಗೆ ತುತ್ತಾಗಿ ಬದುಕುಳಿದವರಿಗೆ ದೀರ್ಘಕಾಲದ ಆಯಾಸ ಸಿಂಡ್ರೋಮ್, ನೋವು, ದೈಹಿಕ ಕ್ರಿಯೆಯಲ್ಲಿ ತೊಂದರೆ, ಹಾರ್ಮೋನ್ ಅಸಮತೋಲನ, ಬಂಜೆತನ ಮತ್ತು ವಿಕಿರಣ-ಪ್ರೇರಿತ ದ್ವಿತೀಯ ಕ್ಯಾನ್ಸರ್‌ಗಳಂತಹ ಸಾಮಾನ್ಯವಾದ ನಿಧಾನವಾಗಿ ಬರುವ ಪರಿಣಾಮಗಳನ್ನು ಅನುಭವಿಸಬಹುದು. ದೀರ್ಘಕಾಲದ ಮರುಕಳಿಸಬಹುದಾದ ಹೃದಯಾಘಾತ (ಹೃದಯಾಘಾತ, ಹೃದಯ ವೈಫಲ್ಯ, ಇತ್ಯಾದಿ), ಮೂತ್ರಪಿಂಡಗಳು, ರಕ್ತದ ಡಿಸ್ಕ್ರೇಸಿಯಾಗಳು, ಮಧುಮೇಹ ಇತ್ಯಾದಿಗಳನ್ನು ಒಳಗೊಂಡಿರುತ್ತವೆ.

ಇದನ್ನೂ ಓದಿ: ಸ್ತನದ ಕ್ಯಾನ್ಸರ್: ಎಚ್ಚರ ಇರಲಿ, ಆತಂಕ ಬೇಡ

ಮಾನಸಿಕವಾಗಿ ಪರಿಣಾಮಗಳು (ಖಿನ್ನತೆ, ಆತಂಕ ಮತ್ತು ಒತ್ತಡ) ಮತ್ತು ಅರಿವಿನ ಪರಿಣಾಮಗಳು (ಚಿಂತನೆ, ನೆನಪಿನ ಶಕ್ತಿ ಮತ್ತು ಏಕಾಗ್ರತೆಯ ಬದಲಾವಣೆಗಳು) ಸಹ ಸ್ಪಷ್ಟವಾಗಿ ಕಂಡುಬರಬಹುದು. ಈ ಪರಿಣಾಮಗಳು ದೈಹಿಕ, ಮಾನಸಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯ ಹಾಗೂ ಒಬ್ಬರ ಸಾಮಾಜಿಕ ಮತ್ತು ಪರಸ್ಪರ ಸಂಬಂಧಗಳಂತಹ ಜೀವನದ ವಿವಿಧ ಅಂಶಗಳ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ, ಕ್ಯಾನ್ಸರ್‌ನಿಂದ ಚೇತರಿಸಿಕೊಂಡವರು ಈ ಸಂಭಾವ್ಯ ದೀರ್ಘಕಾಲೀನ ಪರಿಣಾಮಗಳ ಬಗ್ಗೆ ತಿಳಿಯುವುದು ಮತ್ತು ಸೂಕ್ತ ಬೆಂಬಲ ಮತ್ತು ಆರೈಕೆಯನ್ನು ಹೊಂದಿರುವುದು ಮುಖ್ಯವಾಗಿದೆ.

ಪರಿಣಾಮಗಳನ್ನು ನಿಭಾಯಿಸುವುದು ಹೇಗೆ?

ಕ್ಯಾನ್ಸರ್‌ನಿಂದ ಬದುಕುಳಿಯುವವರ ಆರೈಕೆಯ ಗುರಿಗಳೆಂದರೆ, ದೈಹಿಕ ಮತ್ತು ಭಾವನಾತ್ಮಕ ಯೋಗಕ್ಷೇಮವನ್ನು ಉತ್ತೇಜಿಸುವುದು, ತಡವಾಗಿ ಕಾಣಿಸಿಕೊಳ್ಳುವ ಪರಿಣಾಮಗಳ ಅಪಾಯವನ್ನು ಕಡಿಮೆ ಮಾಡುವುದು ಮತ್ತು ಕ್ಯಾನ್ಸರ್‌ನ ಸಂಭವನೀಯ ಮರುಕಳಿಸುವಿಕೆ ಅಥವಾ ದ್ವಿತೀಯ ಕ್ಯಾನ್ಸರ್‌ಗಳ ಸಂಭವಿಸುವಿಕೆಯ ನಿರಂತರ ಮೇಲ್ವಿಚಾರಣೆ ಮಾಡುವುದಾಗಿದೆ. ಈ ಕೆಳಗಿನವುಗಳು ಕ್ಯಾನ್ಸರ್‌ನಿಂದ ನಿಧಾನವಾಗಿ ಉಂಟಾಗುವ ಪರಿಣಾಮಗಳನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.

1. ಜೀವನಶೈಲಿಯ ಬದಲಾವಣೆಗಳು: ನಿಯಮಿತ ದೈಹಿಕ ಚಟುವಟಿಕೆ, ಸಮತೋಲಿತ ಆಹಾರ ಮತ್ತು ಯೋಗ, ಧ್ಯಾನ ಮತ್ತು ಸಮಾಲೋಚನೆಯಂತಹ ಒತ್ತಡ ನಿರ್ವಹಣೆಯ ತಂತ್ರಗಳ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸುವುದು ಕೂಡ ಈ ಪರಿಣಾಮವನ್ನು ತಗ್ಗಿಸಲು ಮತ್ತು ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಸುಧಾರಿಸಲು ಸಹಾಯ ಮಾಡುತ್ತದೆ.

2. ಶಿಕ್ಷಣ: ಭವಿಷ್ಯದ ಆರೋಗ್ಯದ ಅಪಾಯಗಳು ಮತ್ತು ನಿರಂತರ ಕಣ್ಗಾವಲಿಡುವ ಅಗತ್ಯದ ಬಗ್ಗೆ ಕ್ಯಾನ್ಸರ್‌ನಿಂದ ಬದುಕುಳಿದವರು, ಕುಟುಂಬ ಮತ್ತು ಆರೈಕೆ ಮಾಡುವವರ ಕಲಿಕೆಗಳು ಅತ್ಯಗತ್ಯ.

3. ಪುನರ್ವಸತಿ ಮತ್ತು ವ್ಯಾಯಾಮ ಕಾರ್ಯಕ್ರಮಗಳು: ಪುನರ್ವಸತಿ ಮತ್ತು ವ್ಯಾಯಾಮ ಕಾರ್ಯಕ್ರಮಗಳಲ್ಲಿ ಭಾಗವಹಿಸುವಿಕೆಯು ದೈಹಿಕ ಕಾರ್ಯವನ್ನು ಸುಧಾರಿಸಲು ಮತ್ತು ಆಯಾಸ, ದೌರ್ಬಲ್ಯ ಮತ್ತು ನೋವಿನಂತಹ ನಿಧಾನವಾಗಿ ಉಂಟಾಗುವ ಪರಿಣಾಮಗಳನ್ನು ಪರಿಹರಿಸಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ಪ್ರಾಸ್ಟೇಟ್ ಕ್ಯಾನ್ಸರ್ ಬಗೆಗಿನ ಏಳು ತಪ್ಪು ಕಲ್ಪನೆಗಳು...

4. ಬೆಂಬಲ ಗುಂಪುಗಳು: ಇತರ ಕ್ಯಾನ್ಸರ್‌ನಿಂದ ಬದುಕುಳಿದವರ ಬೆಂಬಲ ಗುಂಪಿಗೆ ಸೇರುವುದು ಭಾವನಾತ್ಮಕ ಬೆಂಬಲವನ್ನು ನೀಡುತ್ತದೆ ಮತ್ತು ಇದೇ ರೀತಿಯ ಅನುಭವಗಳನ್ನು ಹೊಂದಿರುವ ಇತರರೊಂದಿಗೆ ಸಂಪರ್ಕ ಸಾಧಿಸಲು ಸಹಾಯ ಮಾಡುತ್ತದೆ.

5. ವೈದ್ಯರೊಂದಿಗೆ ಮಾತುಕತೆ: ಕ್ಯಾನ್ಸರ್ ಬದುಕುಳಿದವರು ಚಿಕಿತ್ಸೆ ನೀಡುವ ಆಂಕೊಲಾಜಿ ತಂಡದೊಂದಿಗೆ ಸಂಪರ್ಕದಲ್ಲಿರುವುದು, ತಮಗಾಗುತ್ತಿರುವ ಯಾವುದೇ ರೋಗಲಕ್ಷಣಗಳು ಅಥವಾ ಕಾಳಜಿಗಳ ಬಗ್ಗೆ ಮುಕ್ತವಾಗಿ ಮಾತುಕತೆ ನಡೆಸುವುದು ಮತ್ತು ನಿಧಾನವಾಗಿ ಬರುವ ಪರಿಣಾಮಗಳ ಬಗ್ಗೆ ಚರ್ಚಿಸುವುದು ಬಹಳ ಮುಖ್ಯವಾಗಿರುತ್ತದೆ.

6. ಸಂಶೋಧನೆ: ಕ್ಯಾನ್ಸರ್ ಅಥವಾ ಅದರ ಚಿಕಿತ್ಸೆಯನ್ನು ಅನುಸರಿಸಬೇಕಾದ ದೀರ್ಘಕಾಲೀನ ಪ್ರತಿಕೂಲ ಪರಿಣಾಮಗಳನ್ನು ಅರ್ಥಮಾಡಿಕೊಳ್ಳುವುದು, ತಡೆಗಟ್ಟುವುದು ಮತ್ತು ಚಿಕಿತ್ಸೆ ನೀಡುವ ಕಡೆಗೆ ತಿಳಿದುಕೊಳ್ಳಬೇಕಾಗಿದೆ.

7. ನಿಯಮಿತವಾದ ಅನುಸರಣೆಗಳು: ನಿಯಮಿತ ತಪಾಸಣೆಗೆ ಒಳಗಾಗುವುದು ತುಂಬಾ ಮುಖ್ಯವಾಗಿರುತ್ತದೆ. ಆರೋಗ್ಯ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುವ ಮೂಲಕ, ಕ್ಯಾನ್ಸರ್‌ನಿಂದ ಬದುಕುಳಿದವರು ತಮ್ಮ ಯೋಗಕ್ಷೇಮದ ಬಗ್ಗೆ ನಿಗಾ ಇಡಬಹುದು, ಯಾವುದೇ ಸಮಸ್ಯೆಗಳನ್ನು ಮೊದಲೇ ಕಂಡು ಹಿಡಿಯಬಹುದು ಮತ್ತು ಅಗತ್ಯವಿರುವಂತೆ ಸರಿಯಾದ ಚಿಕಿತ್ಸೆ ಮತ್ತು ಬೆಂಬಲವನ್ನು ಪಡೆಯಬಹುದು. ಜೊತೆಗೆ, ಕ್ಯಾನ್ಸರ್ ಚಿಕಿತ್ಸೆಯಿಂದ ಉಂಟಾಗುವ ಸಂಭವನೀಯ ತಡವಾಗಿ ಬರುವ ಪರಿಣಾಮಗಳು ಮತ್ತು ಅವುಗಳನ್ನು ನಿರ್ವಹಿಸುವ ವಿಧಾನಗಳ ಬಗ್ಗೆ ತಿಳಿದುಕೊಳ್ಳಬಹುದು ಮತ್ತು ಪರಿಹಾರಗಳಿಗಾಗಿ ವೈದ್ಯರೊಂದಿಗೆ ಚರ್ಚಿಸಬಹುದು.

ಇದನ್ನೂ ಓದಿ: ಕ್ಯಾನ್ಸರ್ ಹೆಚ್ಚಳ: ಅಸ್ವಾಭಾವಿಕ ಜೀವನಶೈಲಿ ಕಾರಣವೇ?

8. ಅಂಗವೈಕಲ್ಯ/ಉದ್ಯೋಗದಲ್ಲಿ ತಾರತಮ್ಯ/ವಿಮೆ ಇತ್ಯಾದಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುವುದು ಕ್ಯಾನ್ಸರ್‌ನಿಂದ ಬದುಕುಳಿದಿರುವವರ ಪ್ರಮುಖ ಅಂಶವಾಗಿದೆ. ಏಕೆಂದರೆ, ಇದು ವ್ಯಕ್ತಿಯನ್ನು ಸಕ್ರಿಯ, ಆರ್ಥಿಕವಾಗಿ ಕಾರ್ಯಸಾಧ್ಯ ಮತ್ತು ಉತ್ಪಾದಕ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ.

ಲೇಖಕರು: ಡಾ. ಕಾಕೋಲಿ ಲಹ್ಕರ್, ಸಲಹೆಗಾರರು, ಓಲ್ಡ್ ಏರ್‌ಪೋರ್ಟ್ ರಸ್ತೆಯಲ್ಲಿರುವ ಮಣಿಪಾಲ್ ಆಸ್ಪತ್ರೆ, ವೈದ್ಯಕೀಯ ಆಂಕೊಲಾಜಿ ವಿಭಾಗ)


Stay up to date on all the latest ಆರೋಗ್ಯ news
Poll
Khalistani militant Hardeep Singh Nijjar

ಸಿಖ್ ಪ್ರತ್ಯೇಕತಾವಾದಿ ನಿಜ್ಜರ್ ಹತ್ಯೆಯಲ್ಲಿ ಭಾರತದ ಪಾತ್ರವಿದೆ ಎಂಬ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪವನ್ನು ನೀವು ನಂಬುತ್ತೀರಾ?


Result
ಹೌದು
ಇಲ್ಲ

Comments

Disclaimer : We respect your thoughts and views! But we need to be judicious while moderating your comments. All the comments will be moderated by the kannadaprabha.com editorial. Abstain from posting comments that are obscene, defamatory or inflammatory, and do not indulge in personal attacks. Try to avoid outside hyperlinks inside the comment. Help us delete comments that do not follow these guidelines.

The views expressed in comments published on kannadaprabha.com are those of the comment writers alone. They do not represent the views or opinions of kannadaprabha.com or its staff, nor do they represent the views or opinions of The New Indian Express Group, or any entity of, or affiliated with, The New Indian Express Group. kannadaprabha.com reserves the right to take any or all comments down at any time.

flipboard facebook twitter whatsapp