ಖ್ಯಾತ ಉಧ್ಯಮಿ ಕೂಡ ಆಗಿರುವ ಟಿಪ್ಪು ವಂಶಸ್ಥ ಸಾಹಬ್ಜಾದಾ ಮನ್ಸೂರ್ ಅಲಿ ಟಿಪ್ಪು ಅವರು ಇತ್ತೀಚೆಗಿನ ಟಿಪ್ಪು ಜಯಂತಿ ಕುರಿತ ವಿವಾದಗಳು ತಮಗೆ ತೀವ್ರ ನೋವನ್ನುಂಟು ಮಾಡಿದೆ. ಪ್ರಮುಖವಾಗಿ ಟಿಪ್ಪು ಸುಲ್ತಾನ್ ಅವರನ್ನು ಸಾಮೂಹಿಕ ಅತ್ಯಾಚಾರಿ ಎಂದು ಟೀಕಿಸಿರುವ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ಕೂಡಲೇ ಬಹಿರಂಗ ಬೇಷರತ್ ಕ್ಷಮೆ ಯಾಚಿಸಬೇಕು. ಇಲ್ಲವಾದಲ್ಲಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.