ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಷ್ ಇಹಲೋಕ ತ್ಯಜಿಸಿ ಹಲವು ದಿನಗಳೇ ಕಳೆದರೂ ಅಭಿಮಾನಿಗಳ ದುಃಖ ಮಾತ್ರ ಈಗಲೂ ಕಡಿಮೆಯಾಗಿಲ್ಲ. ತಮ್ಮ ನೆಚ್ಚಿನ ನಟನನ್ನು ನೋಡಲು ಪ್ರತೀನಿತ್ಯ ಅಭಿಮಾನಿಗಳ ದಂಡು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ನೆಚ್ಚಿನ ನಟನಿಗಾಗಿ ಪೂಜಾ ಸಾಮಾಗ್ರಿಗಳು, ಬಾಳೆಹಣ್ಣು, ಹೂವು ಹಣ್ಣುಗಳು ಹಾಗೂ ಅಂಬಿಗೆ ಇಷ್ಟವಾದ ರಾಗಿ ಮುದ್ದೆ, ಮಟನ್ ಸಾರನ್ನು ತೆಗೆದುಕೊಂಡು ಬರುತ್ತಿದ್ದಾರೆ.