ರಾತ್ರಿ 8.30ಕ್ಕೆ ಸೋಮಸುಂದರಪಾಳ್ಯದಲ್ಲಿ ಗಲಾಟೆ ನಡೆದಿರುವ ಮಾಹಿತಿ ನಮಗೆ ಸಿಕ್ಕಿತ್ತು.ಐದು ನಿಮಿಷಗಳಲ್ಲಿ ನಾವು ಅಲ್ಲಿಗೆ ತಲುಪಿದ್ದೆವು.ಆಗ ಮೂರ್ತಿ ಕ್ಯಾಬ್ ಚಾಲಕನ ಜತೆ ಜಗಳ ನಿಲ್ಲಿಸುವಂತೆ ಇಂಜಿನಿಯರ್ ವಿಶ್ರಾಂತ್ ಗೆ ಹೇಳಿದ್ದಾರೆ. ಆಗ ವಿಶ್ರಾಂತ್ ಮೂರ್ತಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಲ್ಲದೆ ಅವರ ಮೇಲೆ ಹಲ್ಲೆ ನಡೆಸಿದ್ದನು, ಸಮವಸ್ತ್ರವನ್ನು ಹರಿದು ಹಾಕಿದ್ದನು.