ರಮೇಶ್ ಹತ್ಯೆ ನಂತರ ಅವರ ಕೋಣೆಯಲ್ಲಿದ್ದ ಸಹ್ಹಪಾಠಿಗಳು ನಾಪತ್ತೆಯಾಗಿದ್ದರು. ಅವರನ್ನು ಹುಡುಕಿ ವಿಚಾರಿಸಿದಾಗ ಹತ್ಯೆಯ ರಹಸ್ಯ ಬಲಯಾಗಿತ್ತು. ಜನವರಿ 15ರಂದು ರಮೇಶ್ ಕೋಣೆಯಲ್ಲಿ ಅವರ ಮಿತ್ರರೆಲ್ಲರೂ ಮದ್ಯಪಾನಕ್ಕಾಗಿ ಸೇರಿದ್ದಾರೆ. ಆಗ ವರ್ಮಾ ರಮೇಶ್ ಜತೆ ವಿನಾಕಾರಣ ಜಗಳ ತೆಗೆದಿದ್ದಾನೆ.ಜಗಳ ತಾರಕಕ್ಕೇರಿ ವರ್ಮಾ ರಮೇಶ್ ಗೆ ಕಬ್ಬಿಣದ ರಾಡ್ ನಿಂದ ಹೊಡೆದಿದ್ದಾನೆ, ಬಿಯರ್ ಬಾಟಲಿಯಲ್ಲಿ ಚುಚ್ಚಿ ಗಾಯಗೊಳಿಸಿದ್ದಾನೆ.