ಚಿತ್ರದುರ್ಗ: ಶಾಸಕ ಗೋಪಾಲಕೃಷ್ಣ ಮನೆಯಲ್ಲಿ ಕಳ್ಳತನ

: ಬಳ್ಲಾರಿ ಜಿಲ್ಲೆ ಕೂಡ್ಲಗಿ ಬಿಜೆಪಿ ಶಾಸಕರ ಚಿತ್ರದುರ್ಗ ನಿವಾಸದಲ್ಲಿ ಕಳ್ಳತನವಾಗಿದೆ.
ಚಿತ್ರದುರ್ಗ: ಶಾಸಕ ಗೋಪಾಲಕೃಷ್ಣ ಮನೆಯಲ್ಲಿ ಕಳ್ಳತನ
ಚಿತ್ರದುರ್ಗ: ಶಾಸಕ ಗೋಪಾಲಕೃಷ್ಣ ಮನೆಯಲ್ಲಿ ಕಳ್ಳತನ
ಚಿತ್ರದುರ್ಗ: ಬಳ್ಲಾರಿ ಜಿಲ್ಲೆ ಕೂಡ್ಲಗಿ ಬಿಜೆಪಿ ಶಾಸಕರ ಚಿತ್ರದುರ್ಗ ನಿವಾಸದಲ್ಲಿ ಕಳ್ಳತನವಾಗಿದೆ. 
 ಶಾಸಕ ಗೋಪಾಲಕೃಷ್ಣ ಅವರಿಗೆ ಸೇರಿದ್ದ ಬಾಡಿಗೆ ಮನೆಯ ಬಾಗಿಲು ಒಡೆದು ಒಳನುಗ್ಗಿದ ದುಷ್ಕರ್ಮಿಗಳು ಮನೆಯಲ್ಲೆಲ್ಲಾ  ಹುಡುಕಿ ಕಡೆಗೆ ಐದು ಸಾವಿರ ನಗದು ಹಣವನ್ನು ಕದ್ದು ಪಾರಾರಿಯಾಗಿದ್ದಾರೆ.
ಚಿತ್ರದುರ್ಗದ ಧವಳಗಿರಿ ಬಡಾವಣೆಯಲ್ಲಿ ಇರುವ ಶಾಸಕರ ಬಾಡಿಗೆ ನಿವಾಸದಲ್ಲಿ ಈ ಪ್ರಕರಣ ನಡೆದಿದೆ. ಚಿತ್ರದುರ್ಗಕ್ಕೆ ಆಗಾಗ ಬೌತ್ತಿದ್ದ ಶಾಸಕರು ಇಲ್ಲಿಗೆ ಬಂದಾಗಲೆಲ್ಲಾ ಉಳಿದುಕೊಳ್ಳುವ ಸಲುವಾಗಿ ಈ ಮನೆಯನ್ನು ಬಾಡಿಗೆಗೆ ಪಡೆದಿದ್ದರು.
ಈಗ ಚುನಾವಣೆ ಸಮಯವಾಗಿರುವ ಕಾರಣ ಶಾಸಕರ ಮನೆ ಕಳ್ಳತನ ನಡೆಸಿದರೆ ಕೋಟಿಗಟ್ಟಲೆ ಹಣ ಸಿಗುತ್ತದ ಎಂದು ಭಾವಿಸಿದ ದುಷ್ಕರ್ಮಿಗಳು ಶನಿವಾರ ಬೆಳಗಿನ ಜಾವ ಶಾಸಕರ ಮನೆಗೆ ನುಗ್ಗಿ ಜಾಲಾಡಿದ್ದಾರೆ. ಆದರೆ ಬೀರುವುನಲ್ಲಿದ್ದ ಐದು ಸಾವಿರ ನಗದು ಹೊರತು ಅವರಿಗೆ ಇನ್ನೇನೂ ದೊರಕಿಲ್ಲ.
ಘಟನೆ ಮಾಹಿತಿ ಪಡೆದ  ಕೋಟೆ ಠಾಣೆ ಪೊಲೀಸರು ಸ್ಥಳಕಾಗಮಿಸಿ ಪರಿಶೀಲನೆ ನಡೆಸಿದ್ದು ದೂರು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com