"ನಾವು ವಿಚಾರಣೆಗೆ ಆದೇಶಿಸಿದ್ದೇವೆ. ಆದರೆ ಮೊದಲನೆಯದಾಗಿ, ಇದು ಈ ವರ್ಷ ಆದ ಅಚಾತುರ್ಯವಲ್ಲ. ಅಲ್ಲದೆ ಮತದಾರರ ಪಟ್ಟಿಯಲ್ಲಿ ಹೆಸರನ್ನು ತೆಗೆದು ಹಾಕಲು ಹಾಗು ಸೇರಿಸಲು ಪ್ರತ್ಯೇಕ ಅರ್ಜಿಗಳನ್ನು ಸಲ್ಲಿಸಬೇಕು.ಹಾಗಾಗಿ ಅರ್ಜಿ ಸಲ್ಲಿಸಿದವರ ವಿಚಾರಣೆ ಬಳಿಕವೇ ಅವರ ಹೆಸರನ್ನು ಪಟ್ಟಿಯಿಂದ ಅಳಿಸಲಾಗುವುದು" ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಹೇಳಿದ್ದಾರೆ ಪಟ್ಟಿಯಲ್ಲಿಹಲವರ ಹೆಸರು ನಾಪತ್ತೆಯಾಗಿದ್ದರ ಕುರಿತು ಮಾತ್ರ ದೂರು ನೀಡಿದ್ದರೂ, ಈ ಸಮಸ್ಯೆಯನ್ನು ಚುನಾವಣಾ ಆಯೋಗದ ಗಮನಕ್ಕೆ ತರಲಾಗಿದೆ. ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಯ ಖಾಸಗಿ ಕಾಲೇಜಿನಲ್ಲಿ ಪ್ರಾದ್ಯಾಪಕರಾಗಿರುವ ಪ್ರಹ್ಲಾದ್ ಪಿಎಸ್ದೂರಿನ ಆಧಾರದ ಮೇಲೆ ಸಿಇಒ ಕಛೇರಿಯು ಜಿಲ್ಲಾ ಚುನಾವಣಾಧಿಕಾರಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಮೀಷನರ್ ಗಳಿಗೆ ನೋಟೀಸ್ ನೀಡಲಾಗಿದೆ.