ಮೊನ್ನೆ ಸೋಮವಾರ ಸುಮಾರು 4 ಗಂಟೆಗಳ ಕಾಲ ಪಂಚಕರ್ಮ ಚಿಕಿತ್ಸೆ ಪಡೆದುಕೊಂಡರು, ಅಲ್ಲದೆ ಎಡಗೈ ನೋವಿಗೆ ಸಹ ಚಿಕಿತ್ಸೆ ಪಡೆದುಕೊಂಡರು. ಮಂಡ್ಯ ಜಿಲ್ಲೆಯಲ್ಲಿ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಪರ ಪ್ರಚಾರ ನಡೆಸುತ್ತಿದ್ದಾಗ ಅಭಿಮಾನಿಗಳಿಗೆ ಕೈ ನೀಡಿ ಕುಲುಕುತ್ತಾ ಇದ್ದಿದ್ದರಿಂದ ವಾಹನದಲ್ಲಿ ನಿಂತುಕೊಂಡು, ವಾಹನ ಚಲಿಸುತ್ತಿರುವಾಗ ಕೂಡ ಕೈ ಕುಲುಕಿದ ಕಾರಣ ಕುಮಾರಸ್ವಾಮಿಯವರ ಕೈಗೆ ನೋವಾಗಿತ್ತು. ಆದರೆ ರಾಜಕೀಯದ ಬಿಸಿ ಚಟುವಟಿಕೆಯಿಂದಾಗಿ ಚಿಕಿತ್ಸೆ ಪಡೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಚುನಾವಣೆಯೆಲ್ಲ ಮುಗಿದ ನಂತರ ಕುಮಾರಸ್ವಾಮಿಯವರು ರೆಸಾರ್ಟ್ ಗೆ ಹೋಗಿದ್ದಾರೆ. ಅವರು ಇಲ್ಲಿಗೆ ಬರುತ್ತಿರುವುದು ಇದು ಎರಡನೇ ಬಾರಿ ಎಂದರು ಜೆಡಿಎಸ್ ನಾಯಕರೊಬ್ಬರು.