ಮಧ್ಯರಾತ್ರಿ 1.30 ಸುಮಾರಿಗೆ ಗಣೇಶ್ ತನ್ನ ಸ್ನೇಹಿತರೊಡನೆ ಕೋರಮಂಗಲ ನಾಲ್ಕನೇ ಬ್ಲಾಕ್ ನಲ್ಲಿರುವ ಕಾಫಿ ಶಾಪ್ ಗೆ ಕಾಫಿ ಕುಡಿಯಲಿಕ್ಕಾಗಿ ತೆರಳಿದ್ದನು. ಅಲ್ಲಿಂದ ಹಿಂದಿರುಗುವಾಗ ಗಣೇಶ್ ಸ್ನೇಹಿತ ವಿನಯ್ ತನ್ನ ಹೋಂಡಾ ಗೋಲ್ಡ್ವಿಂಗ್ ಬೈಕಿನಲ್ಲಿ ಹೋಗುತ್ತಿದ್ದರು. ಆಗ ಹಿಂದಿನಿಂದ ಬಂದ ದ್ವಿಚಕ್ರ ಸವಾರರಿಬ್ಬರು ಇವರ ಬೈಕ್ ಅಡ್ಡಗಟ್ಟಿದ್ದಾರೆ. ಅಲ್ಲದೆ ತಾವು ಈ ಬೈಕ್ ನೊಡನೆ ಸೆಲ್ಫಿ ಕ್ಲಿಕ್ಕಿಸಿಕೊಳ್ಲಬೇಕು, ನಮಗೆ ಈ ಬೈಕ್ ನೀಡಬೇಕೆಂದು ಅಪರಿಚಿತರು ಗಣೇಶ್ ಹಾಗೂ ವಿನಯ್ ಗೆ ಬೇಡಿಕೆ ಇಟ್ಟಿದ್ದಾರೆ. ಅದೇ ವೇಳೆ ಅವರಲ್ಲೊಬ್ಬ ಗಣೇಶ್ ನನ್ನು ದೂರ ತಳ್ಳಿ ಅವನಲ್ಲಿದ್ದ ಬೈಕ್ ಕೀಯನ್ನು ಕಿತ್ತುಕೊಂಡಿದ್ದಾನೆ.