ಡಾ ತನ್ಮಯ್ ಗೋಸ್ವಾಮಿ ನೇತೃತ್ವದ ಐವರು ವೈದ್ಯರ ತಂಡ ಈ ಇಬ್ಬರು ನಾಯಕರಿಗೆ ಆಯುರ್ವೇದ ಪಂಚಕರ್ಮ ರಸಾಯನ ತೆರಪಿ ಮಾಡುತ್ತಿದ್ದಾರೆ. ದೇಹಕ್ಕೆ ಶಕ್ತಿ ನೀಡಿ ಸದೃಢವಾಗಿಸಲು ಇರುವ ಚಿಕಿತ್ಸೆಯಿದು. ಈ ವಿಧಾನ ದೇಹದೊಳಗಿರುವ ಕಲ್ಮಷಗಳನ್ನು ತೆಗೆದುಹಾಕುತ್ತದೆ. ಪ್ರಕೃತಿ ಚಿಕಿತ್ಸೆ ವಿಧಾನದ ಮೂಲಕ ಉಸಿರಾಟ, ಆವಿಸ್ನಾನ, ಸಂಪೂರ್ಣ ಸಸ್ಯಾಹಾರ ಸೇವನೆ ಮತ್ತು ಶಾರೀರಿಕ ಚಿಕಿತ್ಸೆಯನ್ನು ಚಿಕಿತ್ಸಾ ವಿಧಾನ ಒಳಗೊಂಡಿದೆ.