ಬೆಂಗಳೂರು: ದರೋಡೆಗೆ ಸಂಚು: ಸಿಸಿಬಿ ಪೊಲೀಸರಿಂದ ಆರು ಮಂದಿ ಆರೋಪಿಗಳ ಬಂಧನ

ದರೋಡಗೆ ಸಂಚು ರೂಪಿಸುತ್ತಿದ್ದ ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಬಂಧಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ದರೋಡಗೆ ಸಂಚು ರೂಪಿಸುತ್ತಿದ್ದ ಆರು ಮಂದಿ ಆರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಕೊತ್ತನೂರು ದೊಡ್ಡ ಗುಬ್ಬಿಯ ಕರ್ನಾಟಕ ಬ್ಯಾಂಕ್ ಹತ್ತಿರದ ನಿವಾಸಿ ಪ್ರತಾಪ್ ಎಚ್ ಕೆ (38) ಕೆ. ಆರ್ . ಪುರ ದೇವಸಂದ್ರ ಲಿಟ್ಲ್ ಬ್ಲೂಮ್ ಶಾಲೆ ಹತ್ತಿರದ ರೈಲ್ವೆ ಕಾಲೋನಿಯ ನಿವಾಸಿ ಪಿ . ಹರೀಶ್ (31) ದೇವಸಂದ್ರ ಮಸೀದಿ ರಸ್ತೆಯ ಲಕ್ಷ್ಮಿ ನರಸಿಂಹ ನಿಲಯ ನಿವಾಸಿ ನದೀಂ (26) ದೇವಸಂದ್ರದ ಅಭಿಷೇಕ್ ( 23)  ಹಾಗೂ ಶಿವ (24)   ಜೆ. ಸಿ. ಲೇಔಟ್ ನ ಸುಮನ್ (26) ಬಂಧಿತ ಆರೋಪಿಗಳು.
ಆರೋಪಿಗಳು ಕೆ. ಆರ್. ಪುರಂ ಠಾಣಾ ವ್ಯಾಪ್ತಿಯ ಐಟಿಐ ಬಸ್ ಡಿಪೋ ರಸ್ತೆ ಬದಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ದಾರಿಯಲ್ಲಿ ಬರುವವರ ಮೇಲೆ ಹಲ್ಲೆ ಮಾಡಿ ಅವರ ಬಳಿ ಇರುವ ನಗದು- ಚಿನ್ನಾಭರಣ ದೋಚಲು ಸಜ್ಜಾಗಿದ್ದರು.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಸಿಸಿಬಿ ಅಧಿಕಾರಿಗಳು, ಕಾರ್ಯಾಚರಣೆ ನಡೆಸಿ ಎಲ್ಲರನ್ನೂ ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com