ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನವಾಜ್ ಅವರನ್ನೊಳಗೊಂಡ ವಿಭಾಗೀಯ ಪೀಠ, ನಾಗರಿಕರು ತೆರಿಗೆ ಕಟ್ಟಿದ ನಂತರವೂ ಕಳಪೆ ಕಾಮಗಾರಿಯ ರಸ್ತೆ ಮತ್ತು ಫುಟ್ ಪಾತ್ ಗಳಿಂದ ಸಾಕಷ್ಟು ಸಾವು-ನೋವುಗಳನ್ನು ಎದುರಿಸಬೇಕಾದ ಸ್ಥಿತಿಯಿದೆ. ಕಳಪೆ ರಸ್ತೆಯಿಂದ ಅಪಘಾತವಾಗಿ ಗಾಯಗೊಂಡರೆ ಅದರ ಪರಿಹಾರವನ್ನು ಬಿಬಿಎಂಪಿಯಲ್ಲಿ ನಾಗರಿಕರು ಕೇಳಬಹುದು ಎಂದು ಹೇಳಿದೆ.