ಸಿದ್ದಾರ್ಥ್ ಸಾವಿನ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಾಲಕೃಷ್ಣನ್, ಸಿದ್ದಾರ್ಥ ಅವರ ಸಾವು ನಿಜಕ್ಕೂ ದುರದೃಷ್ಟಕರ ಮತ್ತು ದುಃಖದ ವಿಷಯ. ಇದರಲ್ಲಿ ಏನೋ ಒಳಸಂಚು ಇದೆ ಎಂದು ಅನಿಸುತ್ತದೆ. ಸಿದ್ದಾರ್ಥ್ ತಮ್ಮ ಆಸ್ತಿಯ ಸಣ್ಣ ಭಾಗವನ್ನು 3,200 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರು ಮತ್ತು ವೈಯಕ್ತಿಕವಾಗಿ ಅವರು ಉತ್ತಮ ಯೋಜನೆ ಮಾಡಿ ಕೆಲಸ ಮಾಡುವ ವ್ಯಕ್ತಿ. ಅವರಿಗೆ ಐಟಿ ಇಲಾಖೆ ಯಾವತ್ತಿಗೂ ಅನ್ಯಾಯ ಮಾಡಿಲ್ಲ ಎಂದರು.