ಬದುಕಿದ್ದಾಗಲೇ ಸಿದ್ಧಾರ್ಥ್ ಅವರ ವ್ಯವಹಾರ-ವಹಿವಾಟಿನ ಬಗ್ಗೆ ಏನಾದರೂ ಹೇಳಿದ್ದರೆ ಅವರೇ ಸ್ಪಷ್ಟನೆ ನೀಡುತ್ತಿದ್ದರು. ಆದರೆ ಅವರು ಗತಿಸಿದ ನಂತರ ಮನಬಂದಂತೆ ಮಾತನಾಡಿದರೆ ಅದಕ್ಕೆ ವ್ಯಾಖ್ಯಾನ, ಉತ್ತರ ನೀಡುವುದು ಹೇಗೆ? ಉತ್ತರ ನೀಡಲು ಅವರೇ ಇಲ್ಲ. ಹೀಗಿರುವಾಗ ಅವರ ಬಗ್ಗೆ ಸುಳ್ಳು ಸುದ್ದಿಗಳನ್ನು ಹಬ್ಬಿಸುವುದು ಸರಿಯಲ್ಲ, ಅವರ ಆತ್ಮಕ್ಕೆ ಶಾಂತಿ ಸಿಗಲಿ, ಅದೇ ರೀತಿ ಅವರ ಕುಟುಂಬದವರನ್ನು ಕೂಡ ನೆಮ್ಮದಿಯಿಂದ ಬದುಕಲು ಬಿಡಿ ಎಂದಿದ್ದಾರೆ.