ಆದರೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾರ್ಥ ದತ್ತಿ ಕಾಯ್ದೆಯ ಪ್ರಕಾರ ಗ್ರಾಚ್ಯುಟಿ ನೀಡುವುದಕ್ಕೆ ಅವಕಾಶವಿದೆ. ಇದು ವಿಶೇಷ ಕಾಯ್ದೆಯಾಗಿದ್ದು, ರಾಷ್ಟ್ರಪತಿಗಳ ಅನುಮೋದನೆಯೂ ಇರುವುದರಿಂದ ಗ್ರಾಚ್ಯುಟಿ ಕಾಯ್ದೆಯನ್ನೂ ಮೀರಿದೆ. ಈ ಹಿನ್ನೆಲೆಯಲ್ಲಿ ರವಿಜಾರಜ ಶೆಟ್ಟಿ ಎಂಬುವವರಿಗೆ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಹಾಗೂ ಧರ್ಮಾರ್ಥ ದತ್ತಿ ಕಾಯ್ದೆಯ ಪ್ರಕಾರ ಗ್ರಾಚ್ಯುಟಿ ನೀಡುವುದಕ್ಕೆ ಅವಕಾಶವಿದ್ದು, ನಾಲ್ಕು ವಾರಗಳಲ್ಲಿ ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕೆಂದು ಕೋರ್ಟ್ ಮೂಕಾಂಬಿಕ ದೇವಾಲಯಕ್ಕೆ ನಿರ್ದೇಶನ ನೀಡಿತ್ತು. ಈ ಆದೇಶವನ್ನು ಪ್ರಶ್ನಿಸಿ ಮೂಕಾಂಬಿಕ ದೇವಾಲಯ ಹೈಕೋರ್ಟ್ ಮೊರೆ ಹೋಗಿತ್ತು.