ಈಗಾಗಲೇ ವಿವಿಧ ರೀತಿಯ ಗಿಡಗಳನ್ನು ತಂದು ಜೋಡಿಸುವ ಕಾರ್ಯ ನಡೆಯುತ್ತಿದೆ. ಜಯಚಾಮರಾಜೇಂದ್ರ ಒಡೆಯರ್ ಅವರಿಗೆ ಇಷ್ಟವಾದ ಸ್ಥಳ ಮೈಸೂರಿನ ಜಯಚಾಮರಾಜೇಂದ್ರ ವೃತ್ತ, ಅವರಿಗೆ ಇಷ್ಟವಾಗಿದ್ದ ಸಂಗೀತ ಪರಿಕರಗಳಾದ ವೀಣೆ, ತಬಲಾ, ವಯಲಿನ್ ಗಳನ್ನು ಪುಷ್ಪಗಳಲ್ಲಿ ಅಲಂಕರಿಸುವುದು, ಸಾಹಿತ್ಯ ಮತ್ತು ಶಿಕ್ಷಣಕ್ಕೆ ಒಡೆಯರ್ ಅವರ ಕೊಡುಗೆಗಳನ್ನು ನೆನಪಿಸುವ ಪುಷ್ಪ ಪ್ರದರ್ಶನಗಳು ಈ ಬಾರಿ ನೋಡುಗರಿಗೆ ಆಕರ್ಷಣೆಯಾಗಿರುತ್ತದೆ. ಗಾಜಿನ ಮನೆಯ ಇನ್ನೊಂದು ಬದಿಯಲ್ಲಿ ಲಂಬ ಉದ್ಯಾನವನ್ನು ರಚಿಸಲಾಗುತ್ತದೆ.