ಮಾಜಿ ಸಚಿವ ಜನಾರ್ದನ ರೆಡ್ಡಿ ಗಣಿ ಹಗರಣದಲ್ಲಿ ಸಿಲುಕಿ ಜೈಲಿಗೆ ಹೋದ ನಂತರ, 2011ರ ರಿಂದ ಸುಷ್ಮಾ ಬಳ್ಳಾರಿಗೆ ಭೇಟಿ ನೀಡುವುದನ್ನು ನಿಲ್ಲಿಸಿದರು. ರೆಡ್ಡಿ ಸಹೋದರರಾದ, ಕರುಣಾಕರ ರೆಡ್ಡಿ, ಜನಾರ್ದನ ರೆಡ್ಡಿ ಹಾಗೂ ಸೋಮಶೇಖರ ರೆಡ್ಡಿ ಅವರಿಗೆ ಗುರುವಾಗಿದ್ದರು. ಆದರೆ ತಾವು ಕೇವಲ ವರಮಹಾಲಕ್ಷ್ಮಿ ಹಬ್ಬ ಆಚರಿಸಲು ಮಾತ್ರ ಬಳ್ಳಾರಿಗೆ ತೆರಳುತ್ತಿದ್ದೆ, ರೆಡ್ಡಿ ಸಹೋದರರ ರಾಜಕೀಯಕ್ಕೂ ನನಗು ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟ ಪಡಿಸಿದ್ದರು.