ಸಕಲೇಶಪುರ-ಸುಬ್ರಮಣ್ಯ ಘಟ್ಟದಲ್ಲಿ ಭೂ ಕುಸಿತ; 2 ರೈಲುಗಳ ಸಂಚಾರ ಸ್ಥಗಿತ

ಸಕಲೇಶಪುರ-ಸುಬ್ರಮಣ್ಯ ರಸ್ತೆಯ ಘಟ್ಟ ಪ್ರದೇಶದ ಸಿರಿವಾಗಿಲು ಮತ್ತು ಸುಬ್ರಹ್ಮಣ್ಯ ರಸ್ತೆ ರೈಲ್ವೆ ನಿಲ್ದಾಣಗಳ ನಡುವೆ ಮಳೆಯಿಂದಾಗಿ ಭೂ ಕುಸಿತ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮಂಗಳೂರು: ಸಕಲೇಶಪುರ-ಸುಬ್ರಮಣ್ಯ ರಸ್ತೆಯ ಘಟ್ಟ ಪ್ರದೇಶದ ಸಿರಿವಾಗಿಲು ಮತ್ತು ಸುಬ್ರಹ್ಮಣ್ಯ ರಸ್ತೆ ರೈಲ್ವೆ ನಿಲ್ದಾಣಗಳ ನಡುವೆ ಮಳೆಯಿಂದಾಗಿ ಭೂ ಕುಸಿತ ಉಂಟಾಗಿದ್ದು, ಈ ಭಾಗದ ಎರಡು ರೈಲುಗಳ ಸಂಚಾರ ಬುಧವಾರ ರದ್ದುಗೊಂಡಿದೆ.
ಗಾಡಿ ಸಂಖ್ಯೆ 16576 ಮಂಗಳೂರು ಜೆ.ಎನ್- ಯಶವಂತಪು ಎಕ್ಸ್ ಪ್ರೆಸ್ ಮತ್ತು ಗಾಡಿ ಸಂಖ್ಯೆ 16586 ಮಂಗಳೂರು ಸೆಂಟ್ರಲ್-ಯಶವಂತಪುರ ಎಕ್ಸ್‌ಪ್ರೆಸ್ ರೈಲುಗಳ ಸೇವೆಗಳನ್ನು ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com