ಚಿಕ್ಕಮಗಳೂರು ಜಿಲ್ಲೆಯಾದ್ಯಂತ ಅತಿಯಾದ ಮಳೆಯಾಗುತ್ತಿದ್ದು, ಅತಿವೃಷ್ಠಿಯಾಗುವ ಸಾಧ್ಯತೆಗಳಿವೆ. ಇವುಗಳ ನಿರ್ವಹಣೆಗೆ ಕಂದಾಯ ಇಲಾಖೆಯ ಕಚೇರಿಗಳು 24 ಗಂಟೆ ಕಾರ್ಯ ನಿರ್ವಹಿಸುವ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಸಿಡ್ಲಗುಂಡಿ ಪ್ರದೇಶದಲ್ಲಿ ಬೇಡ್ತಿ ನದಿ ಉಕ್ಕಿ ಹರಿಯುತ್ತಿದ್ದು, ಯಲ್ಲಾಪುರ ಮುಂಡಗೋಡ ಸಂಚಾರ ಬಂದ್ ಮಾಡಲಾಗಿದೆ. ಯಲ್ಲಾಪುರ, ಶಿರಸಿ, ಅಂಕೋಲಾ ನಡುವಿನ ಸಂಪರ್ಕ ಬಂದ್ ಮಾಡಲಾಗಿದೆ. ಬೇಡ್ತಿ ಸೇತುವೆ ಕುಸಿದಿದ್ದು, ಡೋಗ್ರಿ ಹಾಗೂ ರಾಮನಗುಳಿ ತೂಗು ಸೇತುವೆ ಕೊಚ್ಚಿ ಹೋಗಿದೆ.