ಪ್ರಶಸ್ತಿ ಗೆದ್ದ ಹಣದಿಂದ ಪ್ರವಾಹ ಸಂತ್ರಸ್ತರ ಹಸುಗೂಸುಗಳಿಗೆ ತೊಟ್ಟಿಲು ಕೊಡಿಸಿದ ವಿದ್ಯಾರ್ಥಿನಿ

ಪ್ರಶಸ್ತಿ ಗೆದ್ದ ಹಣದಿಂದ ಪ್ರವಾಹ ಸಂತ್ರಸ್ತರ ಹಸುಗೂಸುಗಳಿಗೆ ತೊಟ್ಟಿಲು ಕೊಡಿಸುವ ಮೂಲಕ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಇತರರಿಗೆ ಮಾದರಿಯಾಗಿದ್ದಾಳೆ.
ಪ್ರವಾಹ ಸಂತ್ರಸ್ತರು
ಪ್ರವಾಹ ಸಂತ್ರಸ್ತರು

ವಿಜಯಪುರ: ಪ್ರಶಸ್ತಿ ಗೆದ್ದ ಹಣದಿಂದ ಪ್ರವಾಹ ಸಂತ್ರಸ್ತರ ಹಸುಗೂಸುಗಳಿಗೆ ತೊಟ್ಟಿಲು ಕೊಡಿಸುವ ಮೂಲಕ 9ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ಇತರರಿಗೆ ಮಾದರಿಯಾಗಿದ್ದಾಳೆ.

ವಿಧಾನ ಪರಿಷತ್ ಕಾಂಗ್ರೆಸ್ ಸದಸ್ಯ ಸುನಿಲ್ ಗೌಡ ಪಾಟೀಲ ಅವರ ಪುತ್ರಿ ಸಾನ್ವಿ, ಬಿ. ಎಂ. ಪಾಟೀಲ್ ಪಬ್ಲಿಕ್ ಸ್ಕೂಲ್ ನಲ್ಲಿ 9ನೇ ತರಗತಿ ಓದುತ್ತಿದ್ದಾಳೆ. ಬಾಗಲಕೋಟೆಯಲ್ಲಿ ನಡೆದ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಆಕೆ ಪ್ರಥಮ ಸ್ಥಾನ ಪಡೆದಿದ್ದಳು. 

ಚಾಂಪಿಯನ್ ಶಿಪ್ ಪಡೆದ 5 ಸಾವಿರ ರೂಪಾಯಿ ಬಹುಮಾನದಿಂದ ತೊಟ್ಟಿಲು ಖರೀದಿಸಿ, ಮುದ್ದೆಬಿಹಾಳ ತಾಲೂಕಿನ ತಂಗಡಗಿ ಗ್ರಾಮದ ಪ್ರವಾಹ ಸಂತ್ರಸ್ತರ ಕೇಂದ್ರಗಳಲ್ಲಿರುವ ಹಸುಗೂಸುಗಳಿಗೆ ಕೊಡುವ ಮೂಲಕ ಸಾನ್ವಿ ಮಾದರಿಯಾಗಿದ್ದಾಳೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com