ಬೆಂಗಳೂರು: ಕತ್ತು ಹಿಸುಕಿ ಪತ್ನಿಯನ್ನು ಕೊಂದು; ಕಿಡ್ನಾಪ್ ಕತೆ ಕಟ್ಟಿದ್ದ ಪತಿ, ಸಹೋದರನ ಬಂಧನ!

ಇಬ್ಬರ ಮಧ್ಯೆ ದಾಂಪತ್ಯ ಜೀವನ ಹೊಂದಾಣಿಕೆ ಆಗದಿದ್ದಕ್ಕೆ ಕೋಪಕೊಂಡ ಪತಿಯೋರ್ವ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ದುರ್ಗಾ ಪರಮೇಶ್ವರಿ ಲೇಔಟ್ ನ ಕೊತ್ತನೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಇಬ್ಬರ ಮಧ್ಯೆ ದಾಂಪತ್ಯ ಜೀವನ ಹೊಂದಾಣಿಕೆ ಆಗದಿದ್ದಕ್ಕೆ ಕೋಪಕೊಂಡ ಪತಿಯೋರ್ವ ತನ್ನ ಪತ್ನಿಯನ್ನು ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ನಗರದ ದುರ್ಗಾ ಪರಮೇಶ್ವರಿ ಲೇಔಟ್ ನ ಕೊತ್ತನೂರಿನಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

21 ವರ್ಷದ ಶಿಲ್ಪಾ ಮೃತ ದುರ್ದೈವಿ. ಸೋಮವಾರದಿಂದ ಶಿಲ್ಪಾ ಕಾಣಿಸದಿರುವುದರಿಂದ ಆಕೆಯ ಕುಟುಂಬಸ್ಥರು ಪತಿ ಕಲ್ಲೇಶನನ್ನು ಪದೇ ಪದೇ ಪ್ರಶ್ನಿಸುತ್ತಿದ್ದ ಹಿನ್ನೆಲೆಯಲ್ಲಿ ಶನಿವಾರ ಆತ ಪತ್ನಿ ನಾಪತ್ತೆಯಾಗಿರುವುದರ ಕುರಿತು ಕೊತ್ತನೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ಅನುಮಾನಗೊಂಡ ಪೊಲೀಸರು ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ದಾಂಪತ್ಯ ಜೀವನಕ್ಕೆ ಒಂದು ವರ್ಷವಾಗಿದ್ದು, ಇಬ್ಬರ ಮಧ್ಯೆ ಹೊಂದಾಣಿಕೆ ಇರಲಿಲ್ಲ. ಆಗಸ್ಟ್ 12ರಂದು ಇಬ್ಬರ ಮಧ್ಯೆ ಹಣಕಾಸಿನ ವಿಚಾರವಾಗಿ ಜಗಳ ನಡೆದಿದ್ದು. ರಾತ್ರಿ 2ಗಂಟೆಯ ಸುಮಾರಿಗೆ ಶಿಲ್ಪಾಳ ಕತ್ತು ಹಿಸುಕಿ ದಿಂಬಿನಿಂದ ಉಸಿರುಗಟ್ಟಿಸಿ ಆಕೆಯನ್ನು ಕೊಲೆಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com