'ಸ್ವಾತಂತ್ರ್ಯ ಬೇಕಿತ್ತು ಅದಕ್ಕೆ ತಂದೆಯನ್ನೆ ಕೊಂದೆ' ಪೊಲೀಸರ ಮುಂದೆ ಹಂತಕಿ ಮಗಳ ತಪ್ಪೊಪ್ಪಿಗೆ

ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. ಮರಳಿ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ತಂದೆಯನ್ನೇ ಕೊಂದಿದ್ದಾಗಿ ಹದಿನಾರರ ಹರೆಯದ ಹಂತಕಿ ಮಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.
'ಸ್ವಾತಂತ್ರ್ಯ ಬೇಕಿತ್ತು ಅದಕ್ಕೆ ತಂದೆಯನ್ನೆ ಕೊಂದೆ' ಪೊಲೀಸರ ಮುಂದೆ ಹಂತಕಿ ಮಗಳ ತಪ್ಪೊಪ್ಪಿಗೆ

ಬೆಂಗಳೂರು: ರಾಜಾಜಿನಗರದ ಬಟ್ಟೆ ವ್ಯಾಪಾರಿ 41 ವರ್ಷದ ಜೈಕುಮಾರ್ ಜೈನ್ ಅವರನ್ನು ಹದಿನಾರರ ಹರೆಯದ ಮಗಳೇ ಪ್ರಿಯಕರನ ಜೊತೆ ಸೇರಿ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾಗಿ ಆಕೆ  ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ

ನನ್ನ ಸ್ವಾತಂತ್ರ್ಯವನ್ನು ಕಿತ್ತುಕೊಳ್ಳಲಾಗಿತ್ತು. ಮರಳಿ ಸ್ವಾತಂತ್ರ್ಯ ಪಡೆಯುವ ನಿಟ್ಟಿನಲ್ಲಿ ತಂದೆಯನ್ನೇ ಕೊಂದಿದ್ದಾಗಿ ಹದಿನಾರರ ಹರೆಯದ ಹಂತಕಿ ಮಗಳು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾಳೆ.

ಸ್ನೇಹಿತರನ್ನು ಭೇಟಿಯಾಗಲು  ಅವರ ಜೊತೆ ಮಾರುಕಟ್ಟೆಗೆ ಹೋಗಲು ಬಿಡುತ್ತಿರಲಿಲ್ಲ. ಮೊಬೈಲ್ ಪೋನ್ ಕಸಿದುಕೊಂಡು ಮುಚ್ಚಿಟ್ಟಿದ್ದರು. ಇಂಟರ್ ನೆಂಟ್ ನ್ನು ಮಿತವಾಗಿ ಬಳಸುವಂತೆ ಹೇಳುತ್ತಿದ್ದರು. ಇದರಿಂದ ಬೇಸತ್ತು ಕೊಲೆ ಮಾಡಿದ್ದಾಗಿ  ಪೊಲೀಸರಿಗೆ ಹೇಳಿಕೆ ನೀಡಿದ್ದಾಳೆ. 

ಪ್ರಿಯಕರ ಪ್ರವೀಣ್ ನನ್ನು ಕದ್ದುಮುಚ್ಚಿ ಭೇಟಿಯಾಗುತ್ತಿದ್ದ ಬಾಲಕಿ ಶನಿವಾರ ಆತನೊಂದಿಗೆ ಸೇರಿ ಆಕೆಯ ತಂದೆ ಜೈಕುಮಾರ್ ಜೈನ್ ನನ್ನು ಕೊಲೆ ಮಾಡಿದ್ದರು. ರಾತ್ರಿ ಕೆಲಸ ಮುಗಿಸಿ ಮನೆಗೆ ಬಂದಿದ್ದ ಜೈಕುಮಾರ್  ಜೈನ್ ಗೆ ಊಟದ ನಂತರ ನಿದ್ದೆ ಮಾತ್ರೆ ಬೆರೆಸಿದ್ದ ಜ್ಯೂಸ್ ಕುಡಿಸಿದ್ದಳು. ನಂತರ ಆತ ಮಲಗಿದ ಎರಡು ಗಂಟೆ ಬಳಿಕ ಪ್ರವೀಣ್ ನನ್ನು ಮನೆಗೆ ಕರೆಸಿಕೊಂಡು, ತಂದೆಗೆ 25 ಕಡೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದರು. ಮೃತದೇಹವನ್ನು  ಪೆಟ್ರೋಲ್ ಸುರಿದ ಬೆಂಕಿ ಹಚ್ಚಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ನಿಗೂಢವಾಗಿ ಕೊಲೆಯಾಗಿದ್ದ  ಜೈಕುಮಾರ್  ಜೈನ್ ಪುತ್ರಿಯ ಪ್ರಿಯಕರ ಬಗ್ಗೆ ಮಾಹಿತಿ ದೊರೆತ ನಂತರ ಆಕೆಯನ್ನು ವಿಚಾರಿಸಿದಾಗ  ತಪ್ಪೊಪ್ಪಿಕೊಂಡಳು ಎಂದು ಪೊಲೀಸರು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com