ಬೆಂಗಳೂರು: ಹಿಂದಿನ ಜನ್ಮದಲ್ಲಿ ನಾವು 'ಗಂಡ-ಹೆಂಡತಿ' ಬುರುಡೆ ಬಿಟ್ಟು 30 ಲಕ್ಷ ದೋಚಿದ್ದ ಸ್ವಾಮೀಜಿಗೆ ಥಳಿತ!

ಒಂದು ಮಗುವಿನ ತಂದೆಯಾಗಿರುವ ಸ್ವಾಮೀಜಿಯೊಬ್ಬ ಯುವತಿಯೋರ್ವಳ ಬಳಿ ನಂದು ನಿಂದು ಏಳೇಳು ಜನ್ಮದ ನಂಟು. ಹಿಂದಿನ ಮೂರು ಜನ್ಮದಲ್ಲೂ ನಾವು ಸತಿ-ಪತಿಗಳಾಗಿದ್ದೇವು ಅಂತ ಬುರುಡೆ ಬಿಟ್ಟು 30 ಲಕ್ಷ ದೋಚಿದ್ದು ಈ ಸುದ್ದಿ...
ನಕಲಿ ಸ್ವಾಮೀಜಿ ಫೋಟೋ
ನಕಲಿ ಸ್ವಾಮೀಜಿ ಫೋಟೋ

ಬೆಂಗಳೂರು: ಒಂದು ಮಗುವಿನ ತಂದೆಯಾಗಿರುವ ಸ್ವಾಮೀಜಿಯೊಬ್ಬ ಯುವತಿಯೋರ್ವಳ ಬಳಿ ನಂದು ನಿಂದು ಏಳೇಳು ಜನ್ಮದ ನಂಟು. ಹಿಂದಿನ ಮೂರು ಜನ್ಮದಲ್ಲೂ ನಾವು ಸತಿ-ಪತಿಗಳಾಗಿದ್ದೇವು ಅಂತ ಬುರುಡೆ ಬಿಟ್ಟು 30 ಲಕ್ಷ ದೋಚಿದ್ದು ಈ ಸುದ್ದಿ ತಿಳಿದ ಯುವತಿಯ ಪೋಷಕರು ಸ್ವಾಮೀಜಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಬೆಂಗಳೂರು ನಿವಾಸಿ 28 ವರ್ಷದ ವೆಂಕಟ ಕೃಷ್ಣಾಚಾರ್ಯ ಎಂಬಾತ ವಿಜಯನಗರದ ನಿವಾಸಿಯಾಗಿರುವ ಚಾರ್ಟೆಡ್ ಅಕೌಂಟೆಂಟ್ ಮನೆಗೆ ಬಂದು ವಾಸ್ತುದೋಷ ನಿವಾರಣೆ ಮಾಡುವುದಾಗಿ ಹೇಳಿಕೊಂಡಿದ್ದಾನೆ. ನಂತರ ಮನೆಯವರ ನಂಬಿಕೆ ಗಳಿಸಿ ಹಲವು ಬಾರಿ ಹೋಮ ಹವನ ಮಾಡಿದ್ದಾನೆ. ಬಳಿಕ ಮನೆಯಲ್ಲಿದ್ದ ಯುವತಿಯೊಂದಿಗೆ ಮೊಬೈಲ್ ನಲ್ಲಿ ಚಾಟಿಂಗ್ ಮಾಡಿ, ಕಳೆದ ಮೂರು ಜನ್ಮಗಳಿಂದ ನಾವು ಗಂಡ-ಹೆಂಡಿತಿಯಾಗಿದ್ದೇವು ಎಂದು ನಂಬಿಸಿ ಆಕೆಯಿಂದ ಹಣ ಪಡೆದು ಪಂಗನಾಮ ಹಾಕಿದ್ದಾನೆ.

ಮೂರು ಜನ್ಮಗಳಿಂದ ನಾವು ಸತಿಪತಿಗಳಾಗಿದ್ದು ನಾನು ಕಾರಣಗಳಿಂದ ದೂರವಾಗಿದ್ದೇವು. ಈ ಜನ್ಮದಲ್ಲಿಯೂ ನಾವು ಮದುವೆಯಾದಾಗ ಮಾತ್ರ ನಮಗೆ ಮೋಕ್ಷ ಸಿಗುತ್ತದೆ ಎಂದು ನಂಬಿಸಿದ್ದಾನೆ. ಬಳಿಕ ಬೇರೆ ಬೇರೆ ಬ್ಯಾಂಕ್ ಗಳಲ್ಲಿ ಯುವತಿಯ ಹೆಸರಿನಲ್ಲಿ 30 ಲಕ್ಷಕ್ಕೂ ಹೆಚ್ಚು ಸಾಲ ಪಡೆದಿದ್ದಾನೆ. ಈ ವಿಷಯ ಯಾರಿಗಾದರೂ ತಿಳಿಸಿದರೆ ನಿನ್ನ ಕೈಕಾಲುಗಳು ಬಿದ್ದು ಹೋಗುವಂತೆ ಮಾಡುತ್ತೇನೆ ಎಂದು ಹೆದರಿಸಿದ್ದಾನೆ. 

ಕೊನೆಗೆ ಯುವತಿ ಮನೆಯಲ್ಲಿ ವಿಷಯ ತಿಳಿಸಿದ್ದು ಬಳಿಕ ಪೋಷಕರು ಮಹಿಳಾ ಸಂಘದ ಸದಸ್ಯರ ಜೊತೆ ಬಂದು ನಕಲಿ ಸ್ವಾಮೀಜಿಗೆ ಹಿಗ್ಗಾಮುಗ್ಗ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com