ಮಡಿಕೇರಿಯಲ್ಲಿ ಕಾರು ಗಾಜು ಪುಡಿಪುಡಿ ಮಾಡಿ ವೆಂಕಟ್ ಹುಚ್ಚಾಟ, ಸ್ಥಳೀಯರಿಂದ ಗೂಸಾ!

ಚೆನ್ನೈನಲ್ಲಿ ಹುಚ್ಚನಂತೆ ತಿರುಗಾಡಿಕೊಂಡಿದ್ದ ನಟ ಹುಚ್ಚ ವೆಂಕಟ್ ಇದೀಗ ಮಡಿಕೇರಿಯಲ್ಲಿ ತನ್ನ ಹುಚ್ಚಾಟವನ್ನು ಮುಂದುವರೆಸಿದ್ದು ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಪುಡಿಪುಡಿ ಮಾಡಿದ್ದು ಇದನ್ನು ಕಂಡ ಸ್ಥಳೀಯರು ವೆಂಕಟ್...
ಹುಚ್ಚಾ ವೆಂಕಟ್
ಹುಚ್ಚಾ ವೆಂಕಟ್

ಮಡಿಕೇರಿ: ಚೆನ್ನೈನಲ್ಲಿ ಹುಚ್ಚನಂತೆ ತಿರುಗಾಡಿಕೊಂಡಿದ್ದ ನಟ ಹುಚ್ಚ ವೆಂಕಟ್ ಇದೀಗ ಮಡಿಕೇರಿಯಲ್ಲಿ ತನ್ನ ಹುಚ್ಚಾಟವನ್ನು ಮುಂದುವರೆಸಿದ್ದು ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿನ ಗಾಜು ಹೊಡೆದು ಪುಡಿಪುಡಿ ಮಾಡಿದ್ದು ಇದನ್ನು ಕಂಡ ಸ್ಥಳೀಯರು ವೆಂಕಟ್ ಗೆ ಹಿಗ್ಗಾಮುಗ್ಗಾ ಥಳಿಸಿರುವ ವಿಡಿೋಯ ಇದೀಗ ವೈರಲ್ ಆಗಿದೆ.

ಮಡಿಕೇರಿಯ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ನಿಲ್ಲಿಸಿದ್ದ ಕಾರಿನ ಗಾಜನ್ನು ವೆಂಕಟ್ ಕಲ್ಲಿನಿಂದ ಹೊಡೆದು ಪುಡಿಪುಡಿ ಮಾಡಿದರು. ನಂತರ ಡ್ರೈವರ್ ಪಕ್ಕದ ಡೋರ್ ಅನ್ನು ಕೀಳಲು ಮುಂದಾದಾಗ ಅಲ್ಲಿ ಸೇರಿದ್ದ ಜನರು ವೆಂಕಟ್ ನನ್ನು ಹಿಡಿದು ಚೆನ್ನಾಗಿ ಥಳಿಸಿದ್ದಾರೆ.

ವೆಂಕಟ್ ಹುಚ್ಚಾಟ ಮೀತಿ ಮೀರಿದಾಗ ಸ್ಥಳಕ್ಕೆ ಬಂದ ಮಡಿಕೇರಿ ಪೊಲೀಸರು ವೆಂಕಟ್ ನನ್ನು ಠಾಣೆಗೆ ಕರೆದೊಯ್ದು ವಿಚಾರಣೆ ನಡೆಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com