ಗುಂಡ್ಲುಪೇಟೆ: ಬಸ್ ಮತ್ತು ಬೈಕ್ ಮಧ್ಯೆ ಮುಖಾಮುಖಿ ಡಿಕ್ಕಿಯಾಗಿ ಬೈಕ್ನಲ್ಲಿದ್ದ ನವ ವಿವಾಹಿತೆ ಹಾಗೂ ಆಕೆಯ ಸಂಬಂಧಿ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ಹೊರವಲಯದಲ್ಲಿ ನಡೆದಿದೆ.
ಬೆಂಡಗಳ್ಳಿ ಗ್ರಾಮದ ನವವಿವಾಹಿತೆ ಕಾವ್ಯ(20) ಹಾಗೂ ಕಾವ್ಯಳ ಸಂಬಂಧಿ ಮಹೇಶ್(30) ಮೃತಪಟ್ಟವರು,
ಘಟನೆಯಲ್ಲಿ ಮೃತಳ ಪತಿ ರಾಜ್ಕುಮಾರ್(28) ಗಂಭೀರವಾಗಿ ಗಾಯಗೊಂಡಿದ್ದು ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿದೆ
.ಬೆಂಡಗಳ್ಳಿಯಿಂದ ಬೀಗರ ಔತಣ ಕೂಟ ಮುಗಿಸಿ ಗುಂಡ್ಲುಪೇಟೆಗೆ ತ್ರಿಬಲ್ ರೈಡಿಂಗ್ನಲ್ಲಿ ಬರುತ್ತಿದ್ದಾಗ ಬೈಕ್ಗೆ ಗುಂಡ್ಲುಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಸಾರಿಗೆ ಬಸ್ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ
.ಸ್ಥಳಕ್ಕೆ ಗುಂಡ್ಲುಪೇಟೆ ಪೊಲೀಸರು ಆಗಮಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವರದಿ :- ಗೂಳಿಪುರ ನಂದೀಶ
Advertisement