ಕಲಬುರಗಿ: ಮೊನ್ನೆಯಷ್ಟೆ ಅಕ್ರಮ ನಾಡ ಪಿಸ್ತೂಲ್ ಹೊಂದಿದ್ದ ಇಬ್ಬರನ್ನು ಬಂಧಿಸಿದ್ದ ಪೊಲೀಸರು, ಈಗ ಮತ್ತೋರ್ವ
ಅಕ್ರಮ ನಾಡ ಪಿಸ್ತೂಲ್ ಹೊಂದಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಜೇವರ್ಗಿ ಪಟ್ಟಣದ ವಿದ್ಯಾನಗರ ನಿವಾಸಿ ರಾಕೇಶ್ ಗಡೂರ ಬಂಧಿತ ಆರೋಪಿ.
ಈತ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಬಾರ್ ಆ್ಯಂಡ್ ಹೊಟೇಲ್ ಗೆ ನುಗ್ಗಿ ಹಫ್ತಾ ವಸೂಲಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಬಾರ್ ಆಂಡ್ ಹೊಟೇಲ್ ಗೆ ನುಗ್ಗಿ ನಾನೇ ರಾಜಾಹುಲಿ ಎಂದು ನಾಡಪಿಸ್ತೂಲ್ ತೋರಿಸಿ ಹೇದರಿಸುತ್ತಿದ್ದ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಜೇವರ್ಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
Advertisement