ವಂಚನೆ ಆರೋಪ: ಸ್ಯಾಂಡಲ್ ವುಡ್ ನಿರ್ದೇಶಕನ ವಿರುದ್ಧ ಪೊಲೀಸ್ ಕೇಸ್!

ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕನ ವಿರುದ್ಧ ಗಂಭೀರ ವಂಚನೆ ಮತ್ತು ಕೊಲೆ ಬೆದರಿಕೆ ಆರೋಪ ಕೇಳಿಬಂದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕನ ವಿರುದ್ಧ ಗಂಭೀರ ವಂಚನೆ ಮತ್ತು ಕೊಲೆ ಬೆದರಿಕೆ ಆರೋಪ ಕೇಳಿಬಂದಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಖ್ಯಾತ ನಿರ್ದೇಶಕ ‘ಆರೆಂಜ್’, ‘ಲವ್ ಗುರು’ ಖ್ಯಾತಿಯ ಪ್ರಶಾಂತ್ ರಾಜ್ ಮೇಲೆ ಈ ಆರೋಪ ಕೇಳಿ ಬಂದಿದ್ದು, ಪ್ರಶಾಂತ್ ರಾಜ್ ತಮ್ಮ ದೂರದ ಸಂಬಂಧಿ ಗಿರಿಜಾ ಮತ್ತು ಚಿಕ್ಕ ವೀರಯ್ಯ ಎಂಬುವವರ ಮಗ ಕೇಸ್‍ ಒಂದರಲ್ಲಿ ಸಿಸಿಬಿ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದನು. ಈ ವಿಚಾರ ತಿಳಿದ ನಿರ್ದೇಶಕ ಪ್ರಶಾಂತ್ ರಾಜ್ ಸಹೋದರ ನವೀನ್ ರಾಜ್, ಮಾವ ನಾಗರಾಜ್ ಚಿಕ್ಕವೀರಯ್ಯನ ಮನೆಗೆ ಹೋಗಿದ್ದರು. 20 ಲಕ್ಷ ಹಣ ನೀಡಿದರೆ ನಿನ್ನ ಮಗನನ್ನು ಪೊಲೀಸರಿಂದ ಬಿಡಿಸಿಕೊಂಡು ಬರುವುದಾಗಿ ಹೇಳಿದ್ದರು.

ಪ್ರಶಾಂತ್ ಮಾತು ನಂಬಿದ ದಂಪತಿ ಮೊದಲಿಗೆ 10 ಲಕ್ಷ ರೂ., 600 ಗ್ರಾಂ ಚಿನ್ನಾಭರಣ ತೆಗೆದುಕೊಂಡು ಹೋಗಿದ್ದರು. ಇದಾದ ಕೆಲದಿನಗಳ ನಂತರ ಮತ್ತೆ ಮನೆಗೆ ಬಂದ ಪ್ರಶಾಂತ್ ರಾಜ್ ಇನ್ನೂ 15 ಲಕ್ಷ ರೂ. ಬೇಕು ಕೊಡಿ ಎಂದು ಕೇಳಿದ್ದಾನೆ. ಇದರಿಂದ ಬೇಸತ್ತ ದಂಪತಿ ನಮ್ಮ ಹಣ ವಾಪಸ್ಸು ಕೊಡುವಂತೆ ಒತ್ತಾಯ ಮಾಡಿದ್ದಾರೆ. ದಂಪತಿಯ ಮಾತಿನಿಂದ ಕೋಪಗೊಂಡ ನಿರ್ದೇಶಕ ಪ್ರಶಾಂತ್ ನಿಮ್ಮ ಮನೆ ಮೇಲೆ ಇಡಿ, ಐಟಿ ದಾಳಿ ಮಾಡಿಸ್ತೀನಿ. 15 ಲಕ್ಷ ರೂ. ಕೊಡದಿದ್ದರೆ ನಿಮ್ಮನ್ನು ಕೊಲೆ ಮಾಡಿಸ್ತೀನಿ ಎಂದು ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ. ಇದೇ ವಿಚಾರವಾಗಿ ದಂಪತಿಗಳು ಪೊಲೀಸರ ಮೊರೆ ಹೋಗಿದ್ದು, ಎಚ್‍ಎಎಲ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಅತ್ತ ಪ್ರಕರಣ ದಾಖಲಾಗುತ್ತಿದ್ದಂತೆಯೇ ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ಸಹೋದರ ನವೀನ್ ರಾಜ್, ಮಾವ ನಾಗರಾಜ್ ಪರಾರಿಯಾಗಿದ್ದು, ತನಿಖೆ ನಡೆಸುತ್ತಿರುವ ಪೊಲೀಸರು ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com