ತಾಜ್​ವೆಸ್ಟ್​ ಎಂಡ್​ ನಲ್ಲಿ ಶ್ರೀರಾಮುಲು ಪುತ್ರಿ ಅದ್ದೂರಿ ನಿಶ್ಚಿತಾರ್ಥ: ಹರಿದು ಬಂದ ಗಣ್ಯರ ದಂಡು

ಆರೋಗ್ಯ ಸಚಿವ ಬಿ.ಶ್ರೀರಾಮುಲು ಪುತ್ರಿಯ ನಿಶ್ಚಿತಾರ್ಥ ನಗರದ ತಾಜ್ ವೆಸ್ಟೆಂಡ್ ಹೊಟೇಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು.
ಶ್ರೀರಾಮಲು ಪುತ್ರಿ ನಿಶ್ಚಿತಾರ್ಥ
ಶ್ರೀರಾಮಲು ಪುತ್ರಿ ನಿಶ್ಚಿತಾರ್ಥ

ಬೆಂಗಳೂರು: ಆರೋಗ್ಯ ಸಚಿವ ಬಿ.ಶ್ರೀರಾಮುಲು ಪುತ್ರಿಯ ನಿಶ್ಚಿತಾರ್ಥ ನಗರದ ತಾಜ್ ವೆಸ್ಟೆಂಡ್ ಹೊಟೇಲ್ ನಲ್ಲಿ ಅದ್ಧೂರಿಯಾಗಿ ನೆರವೇರಿತು.

ಶ್ರೀರಾಮುಲು ಪುತ್ರಿ ರಕ್ಷಿತಾ ಕುಮಾರಿ ಹಾಗೂ ಲಲಿತ್​ ಅವರ ನಿಶ್ಚಿತಾರ್ಥ ನೆರವೇರಿತು. ಇಬ್ಬರೂ ಲಂಡನ್​ನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಲಲಿತ್​ ಹೈದರಾಬಾದ್ ನ ವಾಣಿಜ್ಯೋದ್ಯಮಿ ರವಿಕುಮಾರ್ ಅವರ ಪುತ್ರ.

ಶ್ರೀರಾಮುಲು ದಂಪತಿಗೆ ಒಟ್ಟು ನಾಲ್ವರು ಮಕ್ಕಳು. ರಕ್ಷಿತಾ, ದೀಕ್ಷಿತಾ, ಅಂಕಿತಾ ಹಾಗೂ ಧನುಷ್ ಅವರ ಮಕ್ಕಳ ಹೆಸರು. ರಕ್ಷಿತಾ ಪ್ರಥಮ ಪುತ್ರಿಯಾಗಿದ್ದು, ಮಗಳ ನಿಶ್ಚಿತಾರ್ಥವನ್ನು ಆಕೆ ಇಷ್ಟಪಟ್ಟ ಹುಡುಗನ ಜೊತೆಗೆ ಶ್ರೀರಾಮುಲು ಅವರು ಅದ್ಧೂರಿಯಾಗಿ ಮಾಡುತ್ತಿದ್ದಾರೆ. ಲಂಡನ್‍ನಲ್ಲಿ ಪ್ರೀತಿಯಲ್ಲಿ ಬಿದ್ದ ಜೋಡಿ ಇಂದು ಬೆಂಗಳೂರಿನಲ್ಲಿ ಅದ್ಧೂರಿ ನಿಶ್ಚಿತಾರ್ಥ ಮಾಡಿಕೊಂಡಿದೆ.

ಕಾರ್ಯಕ್ರಮದಲ್ಲಿ ಸಿಎಂ ಯಡಿಯೂರಪ್ಪ, ಸಚಿವ ಆರ್​.ಅಶೋಕ್​ ಸೇರಿದಂತೆ ಇತರ ಗಣ್ಯರು ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com