ಮಂಗಳೂರು: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆದಿದ್ದ ಪ್ರತಿಭಟನೆ ವೇಳೆ ನಡೆದ ಗೋಲಿಬಾರ್ ಸಂತ್ರಸ್ತರನ್ನು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಭೇಟಿ ಮಾಡಿದ್ದಾರೆ.
ಬಂದರು ಕಂದುಕದಲ್ಲಿ ಗೋಲಿಬಾರ್ ನಲ್ಲಿ ಮೃತರಾಗಿದ್ದ ಜಲೀಲ್ ಮನೆಗೆ ತೆರಳಿ ಜಲೀಲ್ ಕುಟುಂಬದ ಜತೆ ಮಾತುಕತೆ ನಡೆಸಿದ ಮಾಜಿ ಸಿಎಂ ಕುಮಾರಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ಮೃತರ ಕುಟುಂಬಕ್ಕೆ 5 ಲಕ್ಷ ರೂ. ಮೌಲ್ಯದ ಚೆಕ್ ವಿತರಿಸಿದರು. ಕುಮಾರಸ್ವಾಮಿ ಅವರಿಗೆ ಜೆಡಿಎಸ್ ಮುಖಂಡ ಫಾರೂಕ್, ಎಂಎಲ್ಸಿ ಭೋಜೇಗೌಡ ಹಾಗೂ ಮುಸ್ಲಿಂ ಮುಖಂಡರು ಸಾಥ್ ನೀಡಿದರು.
ಭೇಟಿ ವೇಳೆ ಜಲೀಲ್ ಪತ್ನಿ ಹಾಗೂ ಕುಟುಂಬಸ್ಥರು ಕುಮಾರಸ್ವಾಮಿ ಮುಂದೆ ಕಣ್ಣೀರು ಹಾಕಿ ತನ್ನ ಅಳಲು ತೋಡಿಕೊಂಡರು. ಜಲೀಲ್ ಮನೆ ಭೇಟಿ ಬಳಿಕ ಫಳ್ನೀರ್ನ ಹೈಲ್ಯಾಂಡ್ ಆಸ್ಪತ್ರೆಗೆ ಭೇಟಿ ನೀಡಿದ ಕುಮಾರಸ್ವಾಮಿ ಐಸಿಯು ಹಾಗೂ ಇತರ ವಿಭಾಗದಲ್ಲಿ ದಾಖಲಾಗಿರುವ ಗಾಯಾಳುಗಾಳಾದ ಇಮ್ರಾನ್, ಸಾಲಿ, ಆಸಿಫ್ ರನ್ನು ಮಾತನಾಡಿಸಿದ್ದಾರೆ. ಕುಮಾರಸ್ವಾಮಿ ಸಂತ್ರಸ್ತರನ್ನು ಭೇಟಿ ಮಾಡಿ ಗಾಯಾಳುಗಳ ಹಾಗೂ ಕುಟುಂಬಸ್ಥರ ಭೇಟಿ ಮಾಡಿ ಚರ್ಚಿಸಿದರು.
ಈ ವೇಳೆ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷ ಮಸೂದ್ ಮನೆಗೆ ಕುಮಾರಸ್ವಾಮಿ ಭೇಟಿ ನೀಡಿ ಮಸೂದ್ ಅವರ ಜೊತೆ ಮಾತುಕತೆ ನಡೆಸಿದು. ಈ ವೇಳೆ ಶಾಸಕ ಯು.ಟಿ.ಖಾದರ್, ಎಂಎಲ್ ಸಿ ಬೋಜೇಗೌಡ, ಬಿ.ಎಂ.ಫಾರೂಕ್ ಕುಮಾರಸ್ವಾಮಿ ಅವರಿಗೆ ಸಾಥ್ ನೀಡಿದ್ದು, ಘಟನೆ ಬಗ್ಗೆ ಮುಸ್ಲಿಂ ಮುಖಂಡರಿಂದ ಮಾಹಿತಿ ಪಡೆದಿದ್ದಾರೆ.
Advertisement