ಕೊಪ್ಪಳ: ರೈತರ ದಿನಾಚರಣೆ ಹಿನ್ನೆಲೆಯಲ್ಲಿ ಕೊಪ್ಪಳದ ವಿದ್ಯಾಸಂಸ್ಥೆಯೊಂದು ರೈತರನ್ನು ಶಾಲೆಗೆ ಕರೆಸಿ ಪಾದಪೂಜೆ ನೆರವೇರಿಸಿದ ವಿಶೇಷ ಪ್ರಸಂಗ ನಡೆದಿದೆ.
ಜಿಲ್ಲೆಯ ಕಾರಟಗಿ ತಾಲೂಕಿನ ಕೆಂಬ್ರಿಡ್ಜ್ ವಿದ್ಯಾಸಂಸ್ಥೆಯಲ್ಲಿ ಇಂತಹಾ ವಿಶೇಷ ಪಾದಪೂಜೆ ನೆರವೇರಿದೆ. ಮಕ್ಕಳಿಗೆ ರೈತರ ಶ್ರಮದ ಕುರಿತು ಅರಿವು ಮೂಡಿಸಲು ಶಾಲಾ ಮುಖ್ಯಸ್ಥರು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಸಂಸ್ಥೆಯ ಮುಖ್ಯಸ್ಥೆಯಾದ ಲೀಲಾ ಮಲ್ಲಿಕಾರ್ಜುನ ಅವರು ಪಾದಪೂಜೆ ಮಾಡಿದ್ದ ರೈತರನ್ನು ಸನ್ಮಾನಿಸಿದ್ದಾರೆ. ಅದ್ದೂರಿ ಕಾರ್ಯಕ್ರಮದಲ್ಲಿ ರೈತರನ್ನು ಸ್ವಾಗತಿಸಿ ಸನ್ಮಾನಿಸಲಾಗಿದೆ..
Advertisement