ಬೆಂಗಳೂರು: ಹಣಕಾಸಿನ ವಿಚಾರಕ್ಕೆ ಸ್ನೇಹಿತನನ್ನೇ ಕೊಲೆ ಮಾಡಿದ 11ಜನರನ್ನು ಪೊಲೀಸರು ಬಂಧಿಸಿದ್ದಾರೆ.
ತಿಲಕ್ (19), ಮಂಜುನಾಥ್ (23), ರೋಷನ್ (19), ಮಹೇಂದ್ರ (18), ಸಂಜಯ್ (19) ಸೇರಿ ಒಟ್ಟು 11 ಮಂದಿ ಬಂಧಿತ ಆರೋಪಿಗಳು.
ಇದೇ 26 ರಂದು ರಾತ್ರಿ 9.15ರ ಸುಮಾರಿಗೆ 25 ವರ್ಷದ ಮಂಜುನಾಥ್ ಎಂಬಾತನನ್ನು ಶ್ರೀರಾಮಪುರದ ಎಲ್ ಎನ್ ಪುರ ಬಸ್ಸು ನಿಲ್ದಾಣದ ಹತ್ತಿರ 7-8 ಜನರ ತಂಡ ಮಾರಾಕಾಸ್ತ್ರಗಳಿಂದ ಕೊಲೆ ಮಾಡಿತ್ತು.
ಮೃತ ಮಂಜುನಾಥ್ , ಆರೋಪಿ ತಿಲಕ್ ನ ಬೈಕ್ ಕಸಿದುಕೊಂಡು 20 ಸಾವಿರ ರೂ ನೀಡಬೇಕೆಂದು ಬೆದರಿಕೆಯೊಡ್ಡಿದ್ದ. ಈ ವಿಷಯವನ್ನು ನಂತರ ತಿಲಕ್, ತನ್ನ ಸ್ನೇಹಿತರ ಬಳಿ ಹೇಳಿಕೊಂಡಿದ್ದನು. ಹಣದ ವಿಚಾರವಾಗಿ ಸ್ನೇಹಿತರೆಲ್ಲರೂ ಮಂಜುನಾಥ್ ನನ್ನು ಕೊಲೆ ಮಾಡಲು ಸಂಚು ರೂಪಿಸಿದ್ದರು ಎಂದು ಆರೋಪಿಗಳು ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement