ಗುಂಡ್ಲುಪೇಟೆ: ಹುರುಳಿ ಸೊಪ್ಪಿನಿಂದ ಹೊತ್ತಿ ಉರಿದ ವ್ಯಾನ್; ಚಾಲಕ, ಮಕ್ಕಳು ಪ್ರಾಣಾಪಾಯದಿಂದ ಪಾರು!

ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡಿದ್ದ ಕಾರಣ ಮಾರುತಿ ವ್ಯಾನೊಂದು ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ.
ವ್ಯಾನ್ ಬೆಂಕಿಗಾಹುತಿ
ವ್ಯಾನ್ ಬೆಂಕಿಗಾಹುತಿ

ಚಾಮರಾಜನಗರ: ರಸ್ತೆಯಲ್ಲಿ ಹುರುಳಿ ಒಕ್ಕಣೆ ಮಾಡಿದ್ದ ಕಾರಣ ಮಾರುತಿ ವ್ಯಾನೊಂದು ಹೊತ್ತಿ ಉರಿದ ಘಟನೆ ಗುಂಡ್ಲುಪೇಟೆ ತಾಲೂಕಿನ ಭೀಮನಬೀಡು ಗ್ರಾಮದಲ್ಲಿ ನಡೆದಿದೆ.

ಹುರುಳಿ ಸೊಪ್ಪಿನಿಂದ ಹೊತ್ತಿ ಉರಿದ ಮಾರುತಿ ವ್ಯಾನ್ ಒಕ್ಕಣೆ ಮಾಡುವಾಗ ಹುರುಳಿ ಸೊಪ್ಪು ಚಕ್ರಕ್ಕೆ ಸಿಲುಕಿ ಬೆಂಕಿ ಹೊತ್ತಿಕೊಂಡಿದ್ದು ಚಾಲಕ ಸೇರಿದಂತೆ ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಕೇರಳ ರಾಜ್ಯದವರಿಗೆ ಸೇರಿದ ವ್ಯಾನ್ ಇದಾಗಿತ್ತು ಎಂದು ತಿಳಿದುಬಂದಿದೆ. ಗ್ಯಾಸ್ ಬಳಸಿದ್ದರಿಂದ ಸಿಡಿಯಲಿದೆ ಎನ್ನುವ ಭೀತಿಗೊಳಗಾದ ಪ್ರತ್ಯಕ್ಷದರ್ಶಿಗಳು ಕಾರಿನ ಬೆಂಕಿಯನ್ನು ನಂದಿಸುವ ಗೋಜಿಗೆ ಹೋಗಲಿಲ್ಲ. ಇದರೊಟ್ಟಿಗೆ, ಒಕ್ಕಣೆಗೆ ಹಾಕಿದ್ದ ಹುರುಳಿ ಸೊಪ್ಪು ಕೂಡ ಸಂಪೂರ್ಣ ಭಸ್ಮವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com